ಮಂಡ್ಯ / ಮದ್ದೂರು : ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರ ಮುಂದೆ ಗಾಡಿ ನಿಲ್ಲಸಲು ಹೋಗಿ ಆಯತಪ್ಪಿ ಬಿದ್ದು, ರಿತೀಕ್ಷ ಎಂಬ ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸ್ವರ್ಣಸಂದ್ರ ಬಳಿಯ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ.
ವಾಣಿ-ಅಶೋಕ್ ಎಂಬುವವರು ಮಗುವಿಗೆ ನಾಯಿ ಕಚ್ಚಿದೆ ಎಂದು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸರು ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್ಅನ್ನು ಅಡ್ಡಗಟ್ಟಿದ್ದಾರೆ ಇದರಿಂದ ಗಾಬರಿಕೊಂಡ ಅಶೋಕ್ ಗಾಡಿ ನಿಲ್ಲಿಸುವ ವೇಳೆ ಆಯತಪ್ಪಿ ತಂದೆ, ತಾಯಿ ಹಾಗೂ ಮಗು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಗು ಹೃತೀಕ್ಷ ತಲೆಯ ಮೇಲೆ ಹಿಂದಿನಿಂದ ಬಂದ ಟೆಂಪೋ ಹರಿದಿದೆ. ಇದರಿಂದ ತಲೆಗೆ ಭಾರೀ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಾಳೆ.
ರಸ್ತೆಯಲ್ಲಿ ಮಗು ಪ್ರಾಣ ಬಿಟ್ಟ ದೃಶ್ಯವನ್ನು ಕಂಡ ಜನರು ಆಘಾತಕ್ಕೊಳಗಿದ್ದಾರೆ ಅಲ್ಲದೆ ಪೊಲೀಸರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಪೋಷಕರು ರಸ್ತೆಯ ಮಧ್ಯೆ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಗೋಳಾಡಿದ್ದಾರೆ.
ಈ ಘಟನೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಸಂಚಾರಕ್ಕೂ ತೊಂದರೆಯಾಯಿತು. ಮೃತ ಮಗು ಹೃತೀಕ್ಷ, ಮದ್ದೂರು ತಾಲೂಕಿನ ಗೊರವನಹಳ್ಳಿಗೆ ಸೇರಿದ ವಾಣಿ ಹಾಗೂ ಅಶೋಕ್ ದಂಪತಿಯ ಮಗಳಾಗಿದ್ದಾಳೆ. ಈ ಘಟನೆ ಸಂಬಂಧವಾಗಿ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
