ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ನಾಯಕತ್ವ ಗುಣ ಬೆಳೆಸುವ ಜೆಸಿಐ’ : ಜೆಸಿ ಮೊಹಮ್ಮದ ವಾಸೀಮ್ ಫಯಾಜ್

ಬಳ್ಳಾರಿ / ಕಂಪ್ಲಿ : ಪ್ರತಿ ಮನುಷ್ಯನಿಗೆ ಉತ್ತಮ ಜೀವನ ನಿರ್ವಹಣೆಯೊಂದಿಗೆ ಉನ್ನತ ಸಾಧನೆಗೆ ವಿವಿಧ ಹಂತಗಳ ತರಬೇತಿ ಅವಶ್ಯಕವಾಗಿದೆ ಎಂದು ಜೆಸಿಐ ನ ವಲಯ ತರಬೇತುದಾರ ಜೆಸಿ ಮೊಹಮ್ಮದ ವಾಸೀಮ್ ಫಯಾಜ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ಏರ್ಪಡಿಸಿದ್ದ ಜೆಸಿಐ ಭಾರತ ರಾಷ್ಟ್ರೀಯ ತರಬೇತಿ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮ ಗುರಿ ಮಾರ್ಗದರ್ಶನ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜೆಸಿಐ ವತಿಯಿಂದ ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ, ಯುವಕರಿಗೆ,ಮಹಿಳೆಯರಿಗೆ ಸೇರಿದಂತೆ ವಿವಿಧ ರಂಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಂತ ಹಂತವಾಗಿ ನಿರಂತರ ತರಬೇತಿ ಆಯೋಜಿಸುವ ಮೂಲಕ ಸದೃಢ ರಾಷ್ಟ್ರನಿರ್ಮಾಣ ಹಾಗೂ ನಾಯಕತ್ವ ಗುಣ ಬೆಳೆಸಲು ಜೆಸಿಐ ಮುಂದಾಗುತ್ತಿದೆ ಎಂದರು.

ಜೆಸಿಐ ಕಂಪ್ಲಿ ಸೋನಾ ಘಟಕದ ಅಧ್ಯಕ್ಷ ಜೆಸಿ ಬಿ‌.ರಸೂಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳಿಗೆ ವಿಶೇಷ ತರಬೇತಿ ನೀಡಿ ಬದಲಾವಣೆಯೊಂದಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುವಂತೆ ಸಂಸ್ಥೆಯು ಪ್ರೇರೇಪಿಸುತ್ತಿದೆ.
ಆದ್ದರಿಂದ ಜೆಸಿಐ ಸೇರ್ಪಡೆ ಮೂಲಕ ಪದವಿ ವಿದ್ಯಾರ್ಥಿಗಳು ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಮುಂದಾಗಬೇಕು ಎಂದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಎಂ.ಪಿ‌.ಬಾಲಾಜಿ ಮಾತನಾಡಿ ಎಲ್ಲಾ ಹಂತದಲ್ಲೂ ತರಬೇತಿ ಪಡೆದರೆ ವಿದ್ಯಾರ್ಥಿಗಳಿಗೆ ಉನ್ನತ ಸಾಧನೆಗೆ ಉತ್ತಮವಾಗುತ್ತೆ ಮಾರ್ಗದರ್ಶನದ ಜೊತೆಗೆ ಸಹಕಾರಿಯಾಗಲಿದೆ ಎಂದರು.

ಜೆಸಿಐ ತರಬೇತಿ ಕಾರ್ಯಾಗಾರದಲ್ಲಿ ವಲಯ ತರಬೇತುದಾರ ಮೊಹಮ್ಮದ್ ವಾಸೀಮ್ ಫಯಾಜ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ಪೂರ್ವಾಧ್ಯಕ್ಷ HGF ಇಂದ್ರಜಿತ್ ಸಿಂಗ್ ಪದಾಧಿಕಾರಿಗಳಾದ ಜೆಸಿ ಅಕ್ಕಿ ಜಿಲಾನ್, ಜೆಸಿ ಯೂಸುಫ್, ಜೆಸಿ ವೆಂಕಟಸಪ್ತಗಿರಿ, ಜೆಸಿ ಅಮರನಾಥ ಶಾಸ್ತ್ರಿ, ಎ. ಎಸ್. ಯಲ್ಲಪ್ಪ, ಉಪನ್ಯಾಸಕರಾದ ಡಾ. ಚಂದ್ರಶೇಖರ ವಿ. ಬಿಳೇಗುಡ್ಡ, ರಾಜ್ಮಾ ಟಿ.ಎಂ.ಆರ್. , ಡಾ.ಜೆ.ಕೃಷ್ಣ, ಡಾ.ಕೆ ಮಹೇಶ, ಡಾ. ಅನ್ನಪೂರ್ಣ ಗುಡದೂರು, ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ