ಚಾಮರಾಜನಗರ/ ಗುಂಡ್ಲುಪೇಟೆ: ಪಟ್ಟಣದಲ್ಲಿ ಅಂಬೇಡ್ಕರ್ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಭೀಮೋತ್ಸವ-2025 ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಡಿ.ದೇವರಾಜು ಅರಸು ಕ್ರೀಡಾಂಗಣದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಟಿ.ನರಸೀಪುರದ ನಳಂದ ಬುದ್ದ ವಿಹಾರದ ಭೋದಿರತ್ನ ಬಂತೇಜಿ ಮತ್ತು ಮಾಜಿ ಶಾಸಕ ಸಿ.ಎಸ್ ನಿರಂಜನ್ ಕುಮಾರ್ ಪುಷ್ಪಾರ್ಚಾನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಭೋದಿರತ್ನ ಬಂತೇಜಿ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ಆಚರಣೆಗಿಂತ ಅವರ ಅನುಸರಣೆ ಮುಖ್ಯ, ಮಕ್ಕಳಿಗೆ ಆಸ್ತಿ ಮಾಡದೆ ಅವರ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡುವಂತೆ ಹೇಳಿದರು, ಸಮ ಸಮಾಜ ಕಟ್ಟಲು ಶಿಕ್ಷಣದಿಂದ ಮಾತ್ರ ಸಾಧ್ಯ, ತಾವು ಉಪವಾಸ ಇದ್ದರೂ ಸಹ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಶೈಕ್ಷಣಿಕವಾಗಿ ಮುಂದೆ ಬರುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಭಾರತಕ್ಕೆ ವಿಶ್ವ ಶ್ರೇಷ್ಠ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಸೀಮಿತ ಮಾಡದೆ ಎಲ್ಲಾ ವರ್ಗದವರು ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು, ತಾನು ಸುಟ್ಟ ಇತರಿರಿಗೆ ಬೆಳಕಾದ ಬಾಬಾ ಅಂಬೇಡ್ಕರ್ ಸಾಹೇಬ ಮಹನೀಯರ ಜಯಂತಿಯನ್ನು ತಾಲ್ಲೂಕಿನಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ಸಂತೋಷವಾಗಿದೆ ಎಂದರು.
ಕೇರಳ ಚಂಡಾ, ಕಂಸಾಳೆ, ಡೊಳ್ಳು ಕುಣಿತ, ಗಾರುಡಿ ಗೊಂಬೆ ಕುಣಿತ, ಡಿಜೆ ,ಮಂಗಳ ವಾದ್ಯ, ತಮಟೆ ಹಾಗೂ ಆನೆಯ ಪ್ರತಿಕೃತಿಯ ಮೇಲೆ ಅಂಬೇಡ್ಕರ್ ಭಾವಚಿತ್ರ ಸೇರಿದಂತೆ ವಿವಿಧ ಕಲಾತಂಡಗಳು ಭೀಮೋತ್ಸವ ಕಾರ್ಯಕ್ರಮದಲ್ಲಿ ಮೆರಗು ತಂದಿತು.
ಕಾರ್ಯಕ್ರಮದಲ್ಲಿ ಕಾಡಾ ಮಾಜಿ ಅಧ್ಯಕ್ಷ ಹೆಚ್.ಎಸ್ ನಂಜಪ್ಪ, ನವೀನ್ ಮೌರ್ಯ ವಕೀಲ ಉಮೇಶ್, ಮುಖಂಡರಾದ ಧೀರಜ್ ಪ್ರಸಾದ್,
ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ, ಎನ್.ಕಮಾರ್, ಸುಭಾಷ್ ಮಾಡ್ರಹಳ್ಳ, ಮಾಜಿ ತಾ. ಪಂ. ಅಧ್ಯಕ್ಷ ಹೊರೆಯಾಲ ಕೃಷ್ಣ, ಗಿರೀಶ್ ಲಕ್ಕೂರು, ಕಮರಹಳ್ಳಿ ರವಿ, ಹೊರೆಯಾಲ ಶಿವಸ್ವಾಮಿ, ಸಂಪತ್ತು,
ವಿಷಕಂಠಮೂರ್ತಿ, ಅಗತಗೌಡನಹಳ್ಳಿ ಬಸವರಾಜು,
ಪಾಳ್ಯ ಶ್ರೀನಿವಾಸ್, ಮೋಹನ್ ದಾಸ್, ಮಲ್ಲೀಕ್,
ವಕೀಲರ ಸಂಘದ ಅಧ್ಯಕ್ಷ ಟಿ.ಎಸ್ ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
