ಕಲಬುರಗಿ/ ಜೇವರ್ಗಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಅಭಿವೃದ್ದಿಗಾಗಿ ಹಲವಾರು ಸವಲತ್ತುಗಳನ್ನು ನೀಡಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ’ ಎಂದು ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಶ್ರೀ ದಿನೇಶ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ರಾಘವೇಂದ್ರ ಸ್ವಾಮಿಗಳ ದೇಗುಲದ ಅಭಿವೃದ್ದಿ ಮತ್ತು ಜೀರ್ಣೋದ್ಧಾರಕ್ಕಾಗಿ ದಿನಾಂಕ 30-05-25 ರಂದು ₹2 ಲಕ್ಷ ಪ್ರೋತ್ಸಾಹ ಧನದ ಚೆಕ್ ನೀಡಿ ಅವರ ಅನಿಸಿಕೆ ವ್ಯಕ್ತಪಡಿಸಿದರು.
ಮಠದ ಟ್ರಸ್ಟ್ ಅಧ್ಯಕ್ಷ ರಮೇಶ್ ಬಾಬು ವಕೀಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಚಾರ್ಯ ಜೋಶಿ, ಸಂಸ್ಥೆಯ ಮೇಲ್ವಿಚಾರಕಿ ಮಮತಾ, ದತ್ತಾತ್ರೇಯ ಕುಲಕರ್ಣಿ ಕೋಳಕೂರ, ಪಿ.ಎಂ.ಮಠ, ಐ.ಎಸ್.ಹಿರೇಮಠ ವಡಗೇರಾ, ಶ್ಯಾಮರಾವ ಕುಲಕರ್ಣಿ ರೇವನೂರ,ಗುರುರಾಜ ಪೊದ್ದಾರ, ಪಾಂಡುರಂಗ ಅವರಾದ, ಭೀಮಸೇನ ಇತರರಿದ್ದರು.
ವರದಿ: ಚಂದ್ರಶೇಖರ ಪಾಟೀಲ್
