ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಘ ಇದರ ವತಿಯಿಂದ ಎರಡು ದಿನಗಳ ಕಾಲ ಜರುಗುತ್ತಿರುವ ಎಂ. ಎಸ್. ಎಂ. ಇ ಸಮಾವೇಶದಲ್ಲಿ ಕರುನಾಡ ಕಂದ ಪತ್ರಿಕೆಯ ವರದಿಗಾರರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ ಅವರು ಎಫ್.ಕೆ.ಸಿ.ಸಿ.ಐ ನಿರ್ದೇಶಕಿ, ರೋಟರಿ ಬೆಂಗಳೂರು ಮಾಜಿ ಅಧ್ಯಕ್ಷೆ ಹಾಗೂ ಕ್ವೀನ್ಸ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಸಂಸ್ಥಾಪಕಿ ಡಾ. ಮಧುರಾಣಿ ಗೌಡ ಅವರನ್ನು ಭೇಟಿ ಮಾಡಿ ಕರುನಾಡ ಕಂದ ಪತ್ರಿಕೆಯನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಎಸ್. ನಂಜುಂಡ ಪ್ರಸಾದ್, ಎಫ್ ಕೆ ಸಿ ಸಿ ಐ ಇದರ ಕೋ- ಚೇರ್ಮನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
