ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘ ಜಿಲ್ಲಾ ಉಪಾಧ್ಯಕ್ಷರಾದ ಜಂಬೂರು ಮರುಳಸಿದ್ದಪ್ಪ ಮಾತನಾಡಿ ಕೊಟ್ಟೂರು ಕೆರೆ ಮತ್ತು ಲೊಟ್ಟನಕೇರಿ ಕೆರೆಗಳಲ್ಲಿ ಹಾಗು ಸುತ್ತ ಮುತ್ತ ಹಾಗೂ ತಾಲೂಕಿನ ಚೆಕ್ ಡ್ಯಾಮ್ ಗಳಲ್ಲಿ ಸುತ್ತ ಮುತ್ತಲಿನ ಗಿಡ ಗಂಟೆಗಳ ಜಂಗಲ್ ಕಟಿಂಗ್ ಮತ್ತು ಕೊಟ್ಟೂರು ಕೆರೆಗೆ ಶತಮಾನವಷ್ಟೆ ತುಂಬಿಲ್ಲ ವಿಪರೀತ ಹೂಳು ಕೂಡಾ ತುಂಬಿದೆ ಹಾಗಾಗಿ ಹೂಳು ಎತ್ತುವ ಜಂಗಲ್ ಕಟಿಂಗ್ ಮಾಡುವ ಕಾರ್ಯಕ್ಕೆ ಸಣ್ಣ ನೀರಾವರಿ ಇಲಾಖೆ ಸಂಬಂಧ ಪಟ್ಟ ಅದಿಕಾರಿಗಳು ಮುಂದಾಗಬೇಕು ಹಾಗೂ ಕೆರೆಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಕೊಟ್ಟೂರು ಮೇಲೆ ಕೂಡ್ಲಿಗಿ ಕೆರೆಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ನೀರು ಹಾದು ಹೋಗುತ್ತದೆ, ಆದರೆ ಕೊಟ್ಟೂರು ಕೆರೆಗೆ ನೀರು ತುಂಬುವುದರ ಬಗ್ಗೆ ಮಲತಾಯಿ ಧೋರಣೆ ಮಾಡಿರುವಂತಹ ಎಲ್ಲಾ ರಾಜಕೀಯ ಪ್ರತಿನಿಧಿಗಳಾಗಿರಲಿ, ಉಸ್ತವಾರಿ ಸಚಿವರಾಗಿರಲಿ. ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆ ಕಡೆಗೆ ಮುಂದಾಗುತ್ತಿಲ್ಲ, ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ರೈತರಿಂದ ಹಾಗು ಸಾರ್ವಜನಿಕರಿಂದ ಮತದಾನ ಹಾಕಿಸಿಕೊಂಡು ಗೆದ್ದ M P ಹಾಗೂ ಶಾಸಕರು ಕೂಡಾ ನಮ್ಮ ಕೆರೆಗೆ ನೀರು ತುಂಬಿಸುವ ಯೋಜನೆ ಕಡೆಗೆ ಗಮನ ಹರಿಸುತ್ತಿಲ್ಲ ಇನ್ನಾದರೂ M P ಹಾಗೂ ಶಾಸಕರುಗಳು ಕೂಡಲೇ ನಮ್ಮ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ರೈತರು ಹಾಗು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ನಮ್ಮಕೊಟ್ಟೂರು ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎನ್ ಭರ್ಮಣ್ಣ ಮಾತನಾಡಿ ಕೊಟ್ಟೂರು ಕೆರೆಗೆ ನೀರು ತುಂಬಿಸುವ ವಿಚಾರವಾಗಿ ಸುಮಾರು 15-20 ವರ್ಷ ಗಳಿಂದಲೂ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಹಲವು ಬಾರಿ ಹೋರಾಟಗಳು ಮಾಡುತ್ತಾ ಬಂದಿದ್ದೇವೆ ಅದರೆ ಸರ್ಕಾರ ಕೆರೆಗಳ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಸರ್ಕಾರ ನಮ್ಮ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಕೈ ಬಿಟ್ಟಿರುವುದು ತಾಲೂಕಿನ ಜನರಿಗೆ ಬಹಳ ಅನ್ಯಾಯವಾಗಿದೆ
ಕೂಡ್ಲಿಗಿ ತಾಲೂಕಿಗೆ 74 ಕೆರೆಗಳಿಗಳಿಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಹಡಗಲಿಯಿಂದ ಕೂಡ್ಲಿಗಿ ಕೆರೆಗೆ ಕೊಟ್ಟೂರು ಹತ್ತಿರ ನೀರಿನ ಪೈಪುಗಳು ಹಾಕಿಕೊಂಡು ಹೋಗಿದ್ದಾರೆ, ನಮ್ಮ ಕೊಟ್ಟೂರು ಕೆರೆಗೆ ಇದು ಯಾವ ನ್ಯಾಯ ಕೂಡ್ಲಿಗಿ ಕೆರೆಗೆ ಅಂದಾಜು 640 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ಕೆರೆಗೆ ನೀರು ತುಂಬಿಸಲು ಒಯ್ಯದಿದ್ದಾರೆ ಕೊಟ್ಟೂರು ಕೆರೆ ಮಾತ್ರ ಮಲತಾಯಿ ಧೋರಣೆಯಾಗಿದೆ,
ಆದರೆ ಕೊಟ್ಟೂರು ಪಟ್ಟದಲ್ಲಿ ಹಲವಾರು ರಾಜಕೀಯ ಗಳು ಇದ್ದಾವೆ, ಯಾವ ರಾಜಕೀಯ ಇರಲಿ ನಮ್ಮ ರೈತ ಸಂಘದವರು ನಾವು ಏನು ಹೇಳುತ್ತೇವೆ ಎಂದರೆ ಕೊಟ್ಟೂರು ಕೆರೆಗೆ ನೀರು ತುಂಬಿಸಿದರೆ ಸುಮಾರು 15-20 ಹಳ್ಳಿ ಜನರು ಬದುಕುತ್ತಾರೆ, ದನ ಕುರಿಗಳಿಗೆ ಅನುಕೂಲವಾಗುತ್ತದೆ, ಕೊಟ್ಟೂರು ಪಟ್ಟಣದಲ್ಲಿ ಇರುವ ಎಲ್ಲಾ ಪ್ರಗತಿ ಪರ ಸಂಘಟನೆ ಪಧಾದಿಕಾರಿ ಗಳು ಸದಸ್ಯರು ರಾಜಕೀಯ ಎಲ್ಲಾ ಪಾರ್ಟಿಗಳು ಬಿಟ್ಟು ಸಾರ್ವಜನಿಕರು ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಎಲ್ಲರೂ ಒಗ್ಗಟ್ಟಾಗಿ ಒಂದು ಹೋರಾಟ ಮಾಡಬೇಕು ಕೊಟ್ಟೂರು ಕೆರೆ ತುಂಬಿದರೆ ಕೊಟ್ಟೂರು ತಾಲೂಕಿನಲ್ಲಿ ಸುಮಾರು 15-20- ಸಣ್ಣ ಕೆರೆಗಳಿಗೆ ನೀರು ತುಂಬಿದರೆ ಸಾರ್ವನಿಕರಿಗೆ ಬದುಕಿ ಜೀವನ ಮಾಡಲು ಅನುಕೂಲವಾಗುತ್ತದೆ, ಮುಖ್ಯ ಮಂತ್ರಿ ಸಿದ್ದರಾಮಯ್ಯನವರು, ನೀರಾವರಿ ಸಚಿವರು, ಕೃಷಿ ಸಚಿವರು, ಕೂಡಲೇ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಮುಂದಾಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುಧ್ದ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆ,ಎಸ್ ನಾಗರಾಜ ಗೌಡ ,ಜೋಳದ ಕೂಡ್ಲಿಗಿ ನೀಲಪ್ಪ, ಡಿ,ಗಿರೀಶ್, ರೈತರು ಇತರರು ಇದ್ದರು.
