ಬಳ್ಳಾರಿ / ಕಂಪ್ಲಿ : ಅಧಿಕಾರದ ಅವಧಿಯಲ್ಲಿ ಮಾಡಿದ ಜನಪರ ಸೇವಾ ಕಾರ್ಯದ ಜತೆಗೆ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಹೆಸರು ಹಚ್ಚಹಸಿರಾಗಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರದ ಅವಧಿಯಲ್ಲಿ ಮಾಡಿದ ಕಾರ್ಯಗಳು ತೃಪ್ತಿದಾಯಕವಾಗಿವೆ ಎಂದು ವಯೋ ನಿವೃತ್ತಿ ಹೊಂದಿದ ಪಿಡಿಒ ಟಿ.ಮಲ್ಲಿಕಾರ್ಜುನ ಹೇಳಿದರು.
ತಾಲೂಕು ಸಮೀಪದ ಗಾದಿಗನೂರು ಗ್ರಾಮದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು, ಸಿಬ್ಬಂದಿ ವರ್ಗದವರು ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಜನರ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗಿದೆ. ಕಳೆದ ನಾಲ್ಕು ವರ್ಷದಿಂದ ಗಾದಿಗನೂರು ಗ್ರಾಪಂಯಲ್ಲಿ ಪಿಡಿಒ ಆಗಿ ಕೆಲಸ ಮಾಡಿದ್ದು, ಇಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸಲಾಗಿದೆ. ಜನತೆಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ. ಕಂಪ್ಲಿ ಸೇರಿದಂತೆ ನಾನಾ ಕಡೆಗಳಲ್ಲಿ ಸೇವಾನುಭವವಾಗಿದೆ. ಇದರಿಂದ ಜನರ ಸಂಕಷ್ಟಗಳನ್ನು ಆಲಿಸಿ, ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಿದೆ ಎಂದರು.
ಇಲ್ಲಿ ಪಿಡಿಒ ಮಲ್ಲಿಕಾರ್ಜುನ ಇವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷೆ ಜಾನಕಮ್ಮ, ಸರ್ವ ಸದಸ್ಯರು, ಮುಖಂಡರಾದ ಕೆ.ಎಸ್.ಬಸವರಾಜ, ಎನ್.ಶಂಕ್ರಪ್ಪ, ಕೆ.ಕೆ.ಶಿವರಾಮಪ್ಪ, ಮಲ್ಲಿಕಾರ್ಜುನ, ಕೆ.ಈರಣ್ಣ, ಜಿ.ತಮ್ಮ ನಳಪ್ಪ, ಎನ್.ಬಸವರಾಜ, ಎಂ.ಗಾಳಪ್ಪ, ಎಂ. ಗೋವಿಂದಪ್ಪ, ಎನ್.ದೇವೇಂದ್ರಪ್ಪ, ಲೋಕೇಶಪ್ಪ, ಎನ್.ತಿಪ್ಪೇರುದ್ರಪ್ಪ, ಕೆ.ಅಯ್ಯನಗೌಡ, ಅಗಸರ ಬರ್ರೆಪ್ಪ, ಎನ್.ದ್ಯಾಮೇಶ, ಚೌಡ್ಕಿ ಚಂದ್ರಪ್ಪ, ಪ್ರಕಾಶ, ಬಡಿಗೇರು ಶಿವಪ್ರಕಾಶ, ಕಾಗಿ ಮಂಜುನಾಥ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
