ಯಾದಗಿರಿ/ಗುರುಮಠಕಲ್: ಗುರುಮಠಕಲ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ದೇವೇಂದ್ರಪ್ಪ, ಡಿ. ಧೂಳಖೇಡ ರವರು ಇಂದು ಸೇವಾ ವಯೋ ನಿವೃತ್ತಿಯಾಗಿದ್ದು,
ಅಪಾರ ಪ್ರಮಾಣದಲ್ಲಿ ಗುರುಮಠಕಲ್ ಸಾರ್ವಜನಿಕರು, ಗುರುಮಠಕಲ್ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಅವರಿಗೆ ಸೇವಾ ನಿವೃತ್ತಿಯ ಶುಭ ಕೋರಿದರು.
ದೇವೇಂದ್ರಪ್ಪ, ಡಿ. ಧೂಳಖೇಡ ರವರು ಮಾತಾನಡಿ ಇಲಾಖೆಯ ವತಿಯಿಂದ ವಿದಾಯ ಹೇಳುವುದು ಕಷ್ಟವಾಗಿದೆ, ಆದರೆ ನಾನು ನಿಮ್ಮೊಂದಿಗೆ ಕೆಲಸ ಮಾಡಿದ ಆನಂದದಾಯಕ ದಿನಗಳನ್ನು ಯಾವಾಗಲೂ ಅಮೂಲ್ಯವಾಗಿ ಪರಿಗಣಿಸುತ್ತೇನೆ, ಈ ನಿವೃತ್ತಿ ನನಗೆ ಸಂತೋಷ ಮತ್ತು ಸಾಮರಸ್ಯವನ್ನು ನೀಡುತ್ತದೆ ಎಂದು ಇಲಾಖೆಯ ಸಿಬ್ಬಂದಿಯನ್ನು ಉದ್ದೇಶಿಸಿ ಅನಿಸಿಕೆ ಹಂಚಿಕೊಂಡರು.
ವರದಿ: ಜಗದೀಶ್ ಕುಮಾರ್ ಭೂಮಾ
