ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿವೃತ್ತಿ ಹೊಂದಿದ ಮುಖ್ಯಾಧಿಕಾರಿ ಕೆ.ದುರುಗಣ್ಣಗೆ ಗೌರವದ ಬೀಳ್ಕೊಡುಗೆ

ಬಳ್ಳಾರಿ / ಕಂಪ್ಲಿ :ಸ್ಥಳೀಯ 21ನೇ ವಾರ್ಡಿನ ಶಿಬಿರದಿನ್ನಿ (ಮಾರುತಿನಗರ) ಯ ಪುರಸಭೆ ಸಮುದಾಯ ಭವನದಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯಾಧಿಕಾರಿ ಕೆ. ದುರುಗಣ್ಣ ಇವರಿಗೆ ಸನ್ಮಾನಿಸಿ ಬೀಳ್ಕೊಟ್ಟರು.
ನಂತರ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಕಂಪ್ಲಿಯಲ್ಲಿ ಮೊದಲ ಹಂತದಲ್ಲಿ ಎರಡು ವರ್ಷ ಮತ್ತು ಎರಡನೇ ಹಂತದಲ್ಲಿ ಎರಡು ವರ್ಷ ಸೇರಿದಂತೆ ಒಟ್ಟಾರೆ ನಾಲ್ಕು ವರ್ಷ ಕಂಪ್ಲಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಇನ್ನಷ್ಟು ದಿನಗಳವರೆಗೆ ಅಗತ್ಯವಾಗಿತ್ತು. ಆದರೆ, ಸರ್ಕಾರದ ನಿಯಮದಂತೆ ವಯೋ ನಿವೃತ್ತಿ ಹೊಂದಿದ್ದು, ಇವರ ನಿವೃತ್ತಿ ಬದುಕು ಸುಂದರವಾಗಿರಲಿ ಎಂದರು.
ಸನ್ಮಾನ ಸ್ವೀಕರಿಸಿ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಕಂಪ್ಲಿ ಪುರಸಭೆಯಲ್ಲಿ ಒಟ್ಟಾರೆ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದು, ಬಳ್ಳಾರಿ, ಹೊಸಪೇಟೆ, ಕುರುಗೋಡು, ಸಿರುಗುಪ್ಪ, ತೆಕ್ಕಲಕೋಟೆ, ಮಸ್ಕಿ, ಲಿಂಗಸೂಗೂರು, ದೇವದುರ್ಗ ಸೇರಿದಂತೆ ಒಟ್ಟಾರೆ 40 ವರ್ಷ ಸರ್ಕಾರಿ ಸೇವೆ ಸಲ್ಲಿಸಿರುವುದು ತೃಪ್ತಿದಾಯಕವಾಗಿದೆ. ಪ್ರತಿಯೊಬ್ಬರ ಸಹಕಾರ, ವಿಶ್ವಾಸದಿಂದ ಒಳ್ಳೆಯ ಕೆಲಸ ಮಾಡಲಾಗಿದೆ ಎಂದರು.
ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಇಲಾಖೆ ಸಿಬ್ಬಂದಿಗಳು ನಿವೃತ್ತಿ ಹೊಂದಿದ ಕೆ.ದುರುಗಣ್ಣ ಹಾಗೂ ಅವರ ಧರ್ಮಪತ್ನಿ ಇವರಿಗೆ ಸನ್ಮಾನಿಸಿ ಗೌರವಿಸಿದರು.

ವಯೋನಿವೃತ್ತಿಯಾದ ಕೆ. ದುರುಗಣ್ಣರವರ ಪರಿಚಯ :
ಇವರು 60 ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದು 1ನೇ ಜೂನ್ 1965 ರಲ್ಲಿ ಕೆ. ಮಾರಪ್ಪ ಮತ್ತು ಕೆ. ಹನುಮಕ್ಕ ಇವರ ಸುಪುತ್ರನಾಗಿ ಜನಿಸಿದರು.
ಇವರ ಧರ್ಮಪತ್ನಿ ಮಾರಮ್ಮ 3 ಜನ ಸುಪುತ್ರರು ಹಾಗೂ ಸೊಸೆಯಂದಿರು ಇದ್ದಾರೆ.
ಇವರು ಒಂದನೇ ನವಂಬರ್ 1984ರಲ್ಲಿ ದಿನಗೂಲಿ ಆಧಾರದ ಮೇಲೆ ಬಳ್ಳಾರಿ ಪಾಲಿಕೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಗೊಂಡರು. ನಂತರ ಒಂದನೇ ನವಂಬರ್ 1994ರಲ್ಲಿ ದಿನಗೂಲಿ ನೌಕರರಿಂದ ಸಕ್ರಮಗೊಂಡು ದ್ವಿತೀಯ ದರ್ಜೆಯ ಸಹಾಯಕರಾಗಿ ಆಯ್ಕೆಯಾಗಿ ಕಾಯಂ ನೌಕರರಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.
ಹನ್ನೊಂದನೇ ಎಪ್ರಿಲ್ 2011ರಂದು ಪ್ರಥಮ ದರ್ಜೆ ಸಹಾಯಕರಾಗಿ ಮುಂಬಡ್ತಿಯನ್ನು ಪಡೆದು 2014ರಲ್ಲಿ ಕಚೇರಿ ವ್ಯವಸ್ಥಾಪಕರ ಹುದ್ದೆಗೆ ಮುಂಬಡ್ತಿಯನ್ನು ಪಡೆದರು 2018ರಲ್ಲಿ ಪ್ರಥಮ ಬಾರಿಗೆ ಕುರುಗೋಡು ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 2017ನೇ ರಲ್ಲಿ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಕರ್ತವನ್ನು ನಿರ್ವಹಿಸಿ, 2018 – 19 ನೇ ಸಾಲಿನಲ್ಲಿ ಕಂಪ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿ 2019 – 20 ನೇ ಸಾಲಿನಲ್ಲಿ ಮಸ್ಕಿ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿದರು. 2020 21ನೇ ಸಾಲಿನಲ್ಲಿ ಎಸ್ಟೇಟ್ ಅಧಿಕಾರಿಯಾಗಿ ಮುಂಬಡ್ತಿ ಹೊಂದಿದ್ದರು. ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಉಪ ಆಯುಕ್ತರಾಗಿ, ಕಂದಾಯ ಆಡಳಿತ ಕೌನ್ಸಿಲ್ ಸೆಕ್ರೆಟರಿ ಹಾಗೂ ಚುನಾವಣೆ ವಿಭಾಗದಲ್ಲಿ 6ನೇ ಜುಲೈ 2023 ರಂದು ಕಂಪ್ಲಿ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಿ ಇಂದು ವಯೋನಿವೃತಿ ಹೊಂದಿದ್ದಾರೆ.

ಇವರ ಸಾಧನೆಗಳು :
1) ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಡ ಜನರಿಗೆ ಮನೆಯ ನಿರ್ಮಾಣಕ್ಕಾಗಿ 300 ಎಕರೆ ಮುಂಡರಗಿ ಪ್ರದೇಶದಲ್ಲಿ ವಸತಿ ಒದಗಿಸಲು ಜಿಲ್ಲಾಡಳಿತದೊಂದಿಗೆ ಮಹಾನಗರ ಪಾಲಿಕೆಯೊಂದಿಗೆ ವಸತಿಯನ್ನು ನೀಡುವಲ್ಲಿ ಇವರ ಪಾತ್ರ ಹೆಚ್ಚಿನದಾಗಿದೆ.
2) ಬಳ್ಳಾರಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಇವರ ಶ್ರಮ ಹೆಚ್ಚು ಇದೆ.
3) ಬಳ್ಳಾರಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಬಡ ವಿದ್ಯಾರ್ಥಿಗಳಿಗೆ ಸೇವೆ ಸೌಲಭ್ಯಗಳನ್ನು ಒದಗಿಸುವುದು.
4) ಬಳ್ಳಾರಿ ಜಿಲ್ಲೆಯಲ್ಲಿ ಪೌರಕಾರ್ಮಿಕರ ವಿಶೇಷ ಕಾಯಂ ನೇಮಕಾತಿಯಲ್ಲಿ ಇವರು ಅತ್ಯಂತ ಮುತ್ತು ಅರ್ಜಿ ವಹಿಸಿ ಸೇವಕಾಯಂ ಗೊಳಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿರುತ್ತಾರೆ.
5) ಕಂಪ್ಲಿ ಪಟ್ಟಣದ ಅಭಿವೃದ್ಧಿಗಾಗಿ ಸೋಮಪ್ಪ ಕೆರೆ ಅಭಿವೃದ್ಧಿ, ಪಟ್ಟಣದ ಮುಖ್ಯ ರಸ್ತೆಗಳ ಅಭಿವೃದ್ಧಿ, ನೀರು ಮತ್ತು ಸರಬರಾಜು ವ್ಯವಸ್ಥೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಭವನಕ್ಕಾಗಿ ಸ್ಥಳವನ್ನು ಗುರುತಿಸುವುದು, ಘನ ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಹೆಚ್ಚಿನ ಶ್ರಮ ವಹಿಸಿ ಕಂಪ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮವಹಿಸಿದ್ದು ಶ್ಲಾಘನೀಯ ಕಾರ್ಯಗಳಾಗಿವೆ.

ವೇದಿಕೆ ಮೇಲಿದ್ದ ಅತಿಥಿಗಳು ಹಾಗೂ ಗಣ್ಯರು ಮುಖ್ಯಾಧಿಕಾರಿಗಳ ಕಾರ್ಯ ಸಾಧನೆಗಳನ್ನು ಕೊಂಡಾಡಿದರು.

ನಂತರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಕೆ. ದುರುಗಣ್ಣರವರು ಸರಕಾರಿ ನೌಕರರ ಜೀವನದಲ್ಲಿ ನಿವೃತ್ತಿ ಒಂದು ಅನಿವಾರ್ಯ ಕಾಲಘಟ್ಟ. ಹಿರಿಯ ಅಧಿಕಾರಿಗಳ ಸೂಕ್ತ ಹಾಗೂ ಸಮಯೋಚಿತ ಮಾರ್ಗದರ್ಶನದಿಂದ ನಾನು ಸಾಗಿದ ಹಾದಿಯಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಮತ್ತು ದಂಡಾಧಿಕಾರಿ ಮಂಜುನಾಥ್ ನಾಯಕ್, ಕಂಪ್ಲಿ ಪುರಸಭೆ ಅಧ್ಯಕ್ಷ ಬಿ. ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್, ತೆಕ್ಕಲಕೋಟೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ, ಕುರುಗೋಡು ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ, ಪುರಸಭೆ ಸದಸ್ಯರಾದ ಲಡ್ಡು ಹೊನ್ನೂರವಲಿ, ವಿ. ಎಲ್. ಬಾಬು. ಟಿ. ವಿ. ಸುದರ್ಶನ್ ರೆಡ್ಡಿ, ಹೂಗಾರ್ ರಮೇಶ, ಮಾಜಿ ಪುರಸಭೆ ಅಧ್ಯಕ್ಷ ಎಂ. ಸುಧೀರ್, ನಾಮ ನಿರ್ದೇಶಕ ಸದಸ್ಯರಾದ ಡಿ. ಮೌನೇಶ, G. ವಿರೂಪಾಕ್ಷಿ, ಸತ್ಯನಾರಾಯಣ ಬಾಬು, ಪುರಸಭೆ ವ್ಯವಸ್ಥಾಪಕ ಚಿತ್ರಗಾರ ಪ್ರಶಾಂತ, ಕಂಪ್ಲಿ ಪುರಸಭೆ ನೌಕರ ಸಂಘದ ಅಧ್ಯಕ್ಷ ಹಾಗೂ ನೈರ್ಮಲ್ಯ ಅಧಿಕಾರಿ ಪ್ರಕಾಶ ಬಾಬು, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಆಪ್ತರು, ಕುಟುಂಬ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ