ವಿಜಯನಗರ/ ಕೂಡ್ಲಿಗಿ :ಸತತ 21 ವರ್ಷ ಭಾರತ ಗಡಿ ಭದ್ರತಾ ಪಡೆಯಲ್ಲಿ ( ಬಿ.ಎಸ್.ಎಫ್.)ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ವೀರ ಯೋಧ ಜಿ. ಶರಣೇಶ್ ಯಾದವ್ ಕ್ಯಾಸನಕೆರೆ ಹಾಗೂ ಅವರ ಧರ್ಮಪತ್ನಿಯವರಿಗೆ ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 1999-2000 ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿದ ಸ್ನೇಹ ಸಾಗರ ಬಳಗದಿಂದ ಶ್ರೀ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದಾ.ಮ. ಶರಣಾಚಾರ್ಯರು ದಾಸೋಹ ಮಠ ಕಾನಾಮಡುಗು ಇವರು ವಹಿಸಿಕೊಂಡರು, ಕಾರ್ಯಕ್ರಮದ ನಿರೂಪಣೆಯನ್ನು ತುಂಬಾ ಅಚ್ಚುಕಟ್ಟಾಗಿ ಬಸವರಾಜ್ ಕೆ ಇವರು ನಡೆಸಿಕೊಟ್ಟರು, ಸ್ವಾಗತ ಭಾಷಣ ಶರಣಬಸಪ್ಪ ಕೆ., ವಂದನಾರ್ಪಣೆ ಬಸೆಟ್ಟಪ್ಪ ಡಿ ಎಮ್ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಿ. ಆರ್. ಪಿ. ಎಫ್ ನಲ್ಲಿ ದೇಶ ಸೇವೆ ಮಾಡಿ ಸ್ವಯಂ ನಿವೃತ್ತಿ ಪಡೆದ ಆಲೂರು ಯೋಧ ಯಾಹಿಯಾ ಇವರಿಗೂ ಸಹ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಗಲಿಂಗಪ್ಪ ಪ್ರಾಂಶುಪಾಲರು ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ದಯಾನಂದ್ ಸಜ್ಜನ್ ಹುಲಿಕೆರೆ ಇವರು ಉಪಸ್ಥಿತರಿದ್ದರು.
ಎನ್. ಪಕೀರಪ್ಪ, ಬಸವ ಕುಮಾರ್ ಟಿ. ಸಿ, ತಿಪ್ಪೇರುದ್ರಪ್ಪ ಬಿಜಿ, ಶರಣಬಸಪ್ಪ .ಕೆ., ಪೋಲಿಸ್ ಇಲಾಖೆಯ ಪ್ರಕಾಶ್ , ವಿಜಯಕುಮಾರ್ ಸೇರಿದಂತೆ ಪ್ರತಾಪ್ ಸಿಂಹ, ಮಂಜಣ್ಣ ಹೊಸಳ್ಳಿ, ಹೇಮಗಿರಿ, ಕೆ. ಎನ್. ಮಂಜುನಾಥ, ಸತೀಶ್, ಬಿ. ಮಂಜುಳಾ, ಕೆ ಪಿ ಆಶಾ, ಪರಿಮಳ, ಗೀತಾ, ಬಸಮ್ಮ, ಗಿರಿಜಮ್ಮ, ನೂರ್ ಜಾನ್ ಬಿ ಹಾಗೂ ನೂರಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
