ಈ ಕಾರ್ಯಕ್ರಮಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಮಾತಿನ ಮನೆಯ ರಾ ಸು ವೆಂಕಟೇಶ ಶುಭಕೋರಿ ಚಾಲನೆ ನೀಡಿದರು. ವಕೀಲ ಪ್ರಭಾಕರ್, ಮುದಲ್ ವಿಜಯ್ ಉಪಸ್ಥಿತಿ ಇತ್ತು. ಹಾಡುಗಳ ಜೊತೆಗೆ ನೃತ್ಯ, ಯೋಗ, ಅಂಗಸಾಧನೆ ಮೊದಲಾದ ಕಲಾ ಪ್ರದರ್ಶನವಿದ್ದದ್ದು ವಿಶೇಷವಾಗಿತ್ತು. ಆರಂಭದಲ್ಲಿ ಸಿಂಧೂ ಸೀತಾರಾಮ್ ಪ್ರಾರ್ಥನೆ ಇತ್ತು ಮಧುಸೂದನ್ ಮೋಹನ್, ಭಾವನಾ, ಸುಮಾ ಮೊದಲಾದವರ ಗಾಯನ ಪ್ರೇಕ್ಷಕರ ಮನ ಸೆಳೆದಿದ್ದವು. ನಯನಾ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಕೊನೆಯಲ್ಲಿ ಕಲಾವಿದರು ಹಾಗೂ ಗಣ್ಯರನ್ನು ಗೌರವಿಸಲಾಯಿತು.
ವರದಿ ಕೊಡಕ್ಕಲ್ ಶಿವಪ್ರಸಾದ್
