
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಡಿ ವೈ ಎಸ್ ಪಿ ಮಲ್ಲೇಶ್ ದೊಡ್ಡಮನಿ ಕೂಡ್ಲಿಗಿ , ಸಿ ಪಿ ಐ ವೆಂಕಟ ಸ್ವಾಮಿ ಮತ್ತು ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು.
ಈ ಶಾಂತಿ ಸಭೆಯಲ್ಲಿ ಡಿ ವೈ ಎಸ್ಪಿ ಮಲ್ಲೇಶ್ ದೊಡ್ಡಮನಿ ಕೂಡ್ಲಿಗಿ ರವರು ಮಾತನಾಡಿ ಅಹಿತಕರ ಘಟನೆ ನೆಡೆಯದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ , ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ದವಿರುತ್ತದೆ ,
ಹಿಂದೂ ಮುಸ್ಲಿಂರೂ ಇಬ್ಬರೂ ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಿ ಶಾಂತಿಗೆ ಭಂಗ ತರುವವರ ವಿರುಧ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾನೂನು ಉಲ್ಲಂಘಿಸುವವರ ವಿರುಧ್ದ ನಿರ್ಧಾಕ್ಷ್ಯಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು, ಸಭೆಯಲ್ಲಿನ ಮುಖಂಡರು ಯುವಕರಿಗೆ ತಿಳಿ ಹೇಳಬೇಕೆಂದು ಮನವಿ ಮಾಡಿದರು.
ಸಿ ಪಿ ಐ ವೆಂಕಟಸ್ವಾಮಿ ರವರು ಮಾತನಾಡಿ ಮುಸ್ಲಿಂ ಭಾಂದವರು ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಮುಸ್ಲಿಂ ಭಾಂದವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು , ಮುಸ್ಲಿಂ ಬಾಂಧವರು, ತಾಲೂಕಿನ ಗ್ರಾಮಸ್ಥರು ಇದ್ದರು.
- ಕರುನಾಡ ಕಂದ
