ಬಳ್ಳಾರಿ/ ಕಂಪ್ಲಿ : ಪಟ್ಟಣದ ಶುಗರ್ ಕಾರ್ಖಾನೆಯಲ್ಲಿರುವ ಕೋದಂಡ ರಾಮಮಂದಿರ ದೇವಸ್ಥಾನದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿಧ್ಯಾರ್ಥಿಗಳಿಂದ ಏರ್ಪಡಿಸಿರುವ ನಮ್ಮೂರ ಶಾಲೆ ನಮ್ಮೂರ 4ನೇ ಫ್ಯಾಕ್ಟರಿ ಹಬ್ಬ ಹಾಗೂ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ವಿಜೃಂಭಣೆಯಿಂದ ರವಿವಾರ ನಡೆಯಿತು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಕಾರ್ಮಿಕರಿಗೆ ಮತ್ತು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು ಅನೇಕ ಹಳೆಯ ವಿದ್ಯಾರ್ಥಿಗಳು ಮಾತನಾಡಿ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಶಿಕ್ಷಕರ ಬಗ್ಗೆ ಹಳೆಯ ನೆನೆಪುಗಳನ್ನು ಹಂಚಿಕೊಂಡರು. ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಸರ್ಕಾರಿ ಶಾಲೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಇನ್ಪೋಸಿಸ್ ಕಂಪನಿಯಿಂದ 10 ಉಚಿತ ಕಂಪ್ಯೂಟರ್ ನೀಡಲಾಗುವುದು, ಇದೆ ರೀತಿ ಪ್ರತಿ ವರ್ಷ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಬೆಳಿಗ್ಗೆ ಕಾಳಿಕಾ ದೇವಸ್ಥಾನದಿಂದ ಕೋದಂಡ ರಾಮ ದೇವಸ್ಥಾನದಿಂದ ಮೆರವಣಿಗೆ ನಂತರ ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ಕಿನ್ನೂರೆಶ್ವೇರ, ವೆಂಕಟೇಶ, ವೆಂಕಟಸ್ವಾಮಿ, ಮಾದವರೆಡ್ಡಿ, ವೀರರೆಡ್ಡಿ, ಚಂದ್ರಕಾಂತತರೆಡ್ಡಿ, ಮೋಹನಕುಮಾರ, ಅಜ್ಜಪ್ಪ, ಹನುಮಂತರೆಡ್ಡಿ ಸೇರಿ ಹಳೆ ವಿದ್ಯಾರ್ಥಿಗಳ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
