ಕುರುಗೋಡು / ಬಾದನಹಟ್ಟಿ : ಭಾರತ ಸರ್ಕಾರ – ಕರ್ನಾಟಕ ಸರ್ಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ – ಜಿಲ್ಲಾ ಪಂಚಾಯತ್- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ. ಜಿಲ್ಲಾ ಸರ್ವೇಕ್ಷಣಾ ಘಟಕ ಬಳ್ಳಾರಿ. ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಬಳ್ಳಾರಿ & ಕುರುಗೋಡು. ತಾಲೂಕು ಪಂಚಾಯತ್ ಕುರುಗೋಡು. ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕುರುಗೋಡು. ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಆಯುಷ್ಮಾನ್ ಆರೋಗ್ಯ ಮಂದಿರ (ಉಪ ಕೇಂದ್ರ/ಆರೋಗ್ಯ ಮತ್ತು ಕ್ಷೇಮ ಕೇಂದ್ರ) ಬಾದನಹಟ್ಟಿ ಗ್ರಾಮ ಪಂಚಾಯತ್ ಬಾದನಹಟ್ಟಿ ಸಹಯೋಗದಲ್ಲಿ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಹಾಗೂ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಕುರಿತಂತೆ ಜಿಲ್ಲೆಯಿಂದ ಆಗಮಿಸಿದ ಅಧಿಕಾರಿ ವೃಂದದವರು ನಾಯಿ ಕಚ್ಚಿದ ಗಾಯದ ನಿರ್ವಹಣೆ ಮತ್ತು ರೇಬಿಸ್ ಸೋಂಕು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಕ್ರಮಗಳು ನಾಯಿಯಲ್ಲಿ ಕಂಡು ಬರುವ ರೇಬಿಸ್ ಲಕ್ಷಣಗಳು ಯಾವ್ಯಾವು? ಮನುಷ್ಯನಲ್ಲಿ ಸುಪ್ತವಾಗಿರುವ ರೇಬಿಸ್ ಲಕ್ಷಣಗಳು ಯಾವ್ಯಾವು ? ರೇಬಿಸ್ ಹೇಗೆ ಹರಡುತ್ತದೆ ರಬೀಸ್ ಎಂದರೇನು? ಪ್ರಥಮ ಚಿಕಿತ್ಸೆ ಬಗ್ಗೆ ಹಾಗೂ ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ ಸಂದರ್ಭದಲ್ಲಿ ಮಾಡಬೇಕಾದ ಕ್ರಮಗಳು ಮತ್ತು ಮಾಡಬಾರದ ಕ್ರಮಗಳು ಬಗ್ಗೆ ಸುದೀರ್ಘವಾಗಿ ಗುಂಪು ಚರ್ಚೆ ಮೂಲಕ ಮತ್ತು ಕಿರು ಚಟುವಟಿಕೆ & ಕರಪತ್ರಗಳನ್ನು ಹಂಚುವ ಮೂಲಕ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಬಾದನಹಟ್ಟಿ ಗ್ರಾಮದ ಮಕ್ಕಳಿಗೆ ಹದಿಹರೆಯ ಕಿಶೋರ/ಕಿಶೋರಿಯರಿಗೆ, ಮಹಿಳೆಯರಿಗೆ, ಪುರುಷರಿಗೆ, ಹಿರಿಯರಿಗೆ ಸುದೀರ್ಘವಾಗಿ ಡಾ|| ವಿಶಾಲಾಕ್ಷಿ ಮತ್ತು ಮರ್ಸಿ ಮೇರಿ ರವರು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಡಾ||ವಿಶಾಲಾಕ್ಷಿ, ಸವಿತಾ, ಸಿಂಧು ಸರಸ್ವತಿ, ಮರ್ಸಿ ಮೇರಿ , ನವೀನ್, ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶಂಷುನ್, ಸಮುದಾಯ ಆರೋಗ್ಯ ಅಧಿಕಾರಿಯಾದ ತಿಮೋತಿ, ಹಾಗೂ ಸ.ಆ.ಕೇಂದ್ರ ಕುರುಗೋಡನ ವಿವಿಧ ಏರಿಯಾದ ಪ್ರಾಥಮಿಕ ಸುರಕ್ಷಣಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹದಿಹರೆಯದವರ ಸ್ನೇಹಾಕ್ಲಿನಿಕ್ ಆರೋಗ್ಯ ಆಪ್ತ ಸಮಾಲೋಚಕರು, ಆಶಾ ಕಾರ್ಯಕರ್ತರು, ಊರಿನ ಹಿರಿಯರು ಮುಂತಾದವರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
