ಚಾಮರಾಜನಗರ/: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪಿ.ಆರ್ಇ.ಡಿ. ಇಲಾಖೆ ವತಿಯಿಂದ ಕ್ಷೇತ್ರ ವ್ಯಾಪ್ತಿಯ ಮಧುವನಹಳ್ಳಿ,ದೊಡ್ಡಿಂದವಾಡಿ, ಸಿಂಗನಲ್ಲೂರು, ಗ್ರಾಮಗಳಲ್ಲಿ ಬೂದು ನಿರ್ವಹಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಪುರಸಭೆ ಹಾಗೂ ನಗರ ಪಂಚಾಯಿತಿ ಗಳಲ್ಲಿ ಯೋಜನೆಯು ಜಾರಿಯಲ್ಲಿತ್ತು ಇದೀಗ ಸರ್ಕಾರವು ಯೋಚಿಸಿ ಗ್ರಾಮಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ ಒಳ್ಳೆಯ ಕೆಲಸ ನೈರ್ಮಲ್ಯ ತಡೆಗಟ್ಟಲು ಸ್ವಚ್ಛತೆ ಕಾಪಾಡಲು ಉತ್ತಮ ಯೋಜನೆಯಾಗಿದೆ ಹಾಗೂ ಸುಮಾರು ಹಲವಾರು ಕೋಟಿಗಳಲ್ಲಿ ಈ ಕಾಮಗಾರಿಯು ನಡೆಯಲಿದೆ ಫಿಲ್ಟರ್ ಆದ ಚರಂಡಿ ನೀರನ್ನು ಕೃಷಿಗೆ ಯೋಗ್ಯವಾಗಿ ಬಳಸಿಕೊಳ್ಳಬಹುದು ಎಂದರು ಗುತ್ತಿಗೆದಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರುಗಳು ಗ್ರಾಮಸ್ಥರು ಹೇಳುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಒಂದು ವಾರದೊಳಗೆ ಕಾಮಗಾರಿಯ ಕೆಲಸವೂ ಶುರುವಾಗಬೇಕು ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಹಕಾರದೊಡನೆ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಸದಸ್ಯರುಗಳು ಹಾಗೂ ಪಿ. ಡಿ. ಓ.ಹಾಗೂ ಜೆಡಿಎಸ್ ಮುಖಂಡರು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್
