
ಚಿಕ್ಕಮಗಳೂರು / ಕೊಪ್ಪ : ಈ ದಿನ ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಜಿ. ಕೆ. ರವರು ಕೊಪ್ಪದ ಅರಣ್ಯ ಕಚೇರಿ ಹತ್ತಿರ ಗಾಯವಾಗಿ ಮಲಗಿದ್ದ ದನವನ್ನು ಸೂಕ್ತ ಚಿಕಿತ್ಸೆ ಕೊಡಿಸಿ ವಾಹನ ಕರೆಸಿ ವಾರಸುದಾರರ ಮನೆಗೆ ಕಳಿಸಿ ಮಾನವೀಯತೆ ಮೆರೆದಿರುತ್ತಾರೆ.
ಮಾನವೀಯತೆ ಮೆರೆದ ಕೊಪ್ಪದ ಪಿಎಸ್ಐ ಬಸವರಾಜ್ ಜಿ. ಕೆ. ರವರು ಹಾಗೂ ಸಿಬ್ಬಂದಿ ಅವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ಇವರು ಸದಾ ತಮ್ಮ ವೃತ್ತಿ ಯ ಜೊತೆಗೆ ಮಾನವೀಯ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ಬರೇ ಮಾತಿನಲ್ಲಿ ಭಾಷಣ ಮಾಡುವ ರಾಜಕಾರಣಿಗಳ ಮಧ್ಯೆ ಸದಾ ಸದ್ದಿಲ್ಲದೆ ಇಂತಹ ಕಾರ್ಯ ಮಾಡುತ್ತಿರುವ ಇಂತಹ ಠಾಣಾಧಿಕಾರಿ ಕೊಪ್ಪದಲ್ಲಿ ಇರುವುದು ಸಾರ್ವಜನಿಕರ ಸೌಭಾಗ್ಯವಾಗಿದೆ.
ಮುಂದೆಯೂ ಸಹ ಇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಲು ದೇವರು ಶಕ್ತಿ ನೀಡಲಿ ಎಂದು ಕರುನಾಡ ಕಂದ ಪತ್ರಿಕಾ ಬಳಗ ಪ್ರಾರ್ಥಿಸುತ್ತದೆ.
ವರದಿ : ಜಿಲಾನಸಾಬ್ ಬಡಿಗೇರ್
