ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಸತಿ ನಿಲಯಕ್ಕೆ ದಾರಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ವಿದ್ಯಾರ್ಥಿಗಳು: ಶರಣಬಸಪ್ಪ ದಾನಕೈ ಎಸ್.ಡಿ.ಎಂ.ಸಿ ರಾಜ್ಯ ನಿರ್ದೇಶಕ ಒತ್ತಾಯ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸಾಯಿಬಾಬಾ ದೇವಸ್ಥಾನದ ಮುಂದೆ ಇರುವ, ರೈಲ್ವೆ ಬ್ರೀಜ್ ಮುಂದೆ ಕಾಣುವ ಯಲಬುರ್ಗಾದಿಂದ ಸಂಗನಾಳ ಮಾರ್ಗದಲ್ಲಿ , ಎರಡು ಕಿಲೋಮೀಟರ್ ಅಂತರದಲ್ಲಿರುವ ವಸತಿ ನಿಲಯಕ್ಕೆ ಈ ಮೊದಲು ವಿದ್ಯಾರ್ಥಿಗಳು ಹೋಗುತ್ತಿದ್ದರೂ ಈಗ ರೈಲ್ವೆ ಬ್ರಿಜ್ ಆದ ನಂತರ ಸಮಸ್ಯೆ ಉದ್ಭವವಾಗಿದೆ, ಭೂ ಮಾಲೀಕರಾದ ಪಟ್ಟಣ ಪಂಚಾಯತ್ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಇವರು ರೈಲ್ವೆ ಇಲಾಖೆಯಿಂದ ನನಗೆ ಯಾವುದೇ ಪರಿಹಾರ ಬಂದಿರುವುದಿಲ್ಲವೆಂದು ವಸತಿ ನಿಲಯಕ್ಕೆ ಹೋಗುವ ದಾರಿಗೆ ಒಡ್ಡು ಹಾಕಿ ತಡೆ ಒಡ್ಡಿದ್ದಾರೆ, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ವಸತಿ ನಿಲಯಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವುದಕ್ಕೆ ತೊಂದರೆಯಾಗುತ್ತದೆ ಈ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಬೇಕು ಎಂದು ಎಸ್‌ಡಿಎಂಸಿ ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ. ದಾರಿ ಸರಿಪಡಿಸುವ ವಿಚಾರವಾಗಿ ಮೌಖಿಕವಾಗಿ ಪಟ್ಟಣದ ಮುಖ್ಯಾಧಿಕಾರಿ ಅವರ ಗಮನಕ್ಕೆ ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿ ಅವರು ಮೌಖಿಕವಾಗಿ ಹಾಗು ಲಿಖಿತವಾಗಿ ತಿಳಿಸಿದ್ದಾರೆ ಮತ್ತು ಯಲಬುರ್ಗಾದ ಪಿ.ಎಸ್.ಐ ಹಾಗೂ ಸಿ.ಪಿ.ಐ ಅವರಿಗೂ ಮನವಿಯನ್ನು ವಿದ್ಯಾರ್ಥಿಗಳ ಮೂಲಕ ಕೊಟ್ಟಿದ್ದಾರೆ ,ಮನವಿಗೆ ಸ್ಪಂದಿಸಿ ಯಲಬುರ್ಗಾದ ಪೋಲಿಸ್ ಅಧಿಕಾರಿಗಳು ದಾರಿ ಸರಿಪಡಿಸಿದ್ದಾರೆ ಆದರೆ ಹೊಲದ ಮಾಲಿಕ ಮತ್ತೆ ದಾರಿಯನ್ನು ಮುಚ್ಚಿದ್ದಾನೆ, ಇದರಿಂದ ವಸತಿ ನಿಲಯಕ್ಕೆ ಹೊಗುವ ಪ್ರತಿಯೋಬ್ಬರಿಗೂ ತೊಂದರೆಯಾಗುತ್ತದೆ, ಆದರೆ ಹೊಲದ ಮಾಲೀಕ ನನಗೆ ಪರಿಹಾರ ಬಂದ ಮೇಲೆ ಒಡ್ಡು ತಗೆಯುವದಾಗಿ ತಿಳಿಸಿದ್ದಾನೆ, ಒಟ್ಟಿನಲ್ಲಿ ಗಂಡ ಹೆಂಡರ ಜಗಳದಲ್ಲಿ ಕೂಸು ಗಾಸಿಯಾಗಿತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ವಿಷಯದ ಬಗ್ಗೆ ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಜಿಲ್ಲಾಧಿಕಾರಿಯವರು ವಿದ್ಯಾರ್ಥಿಯವರಿಗೆ ಅನುಕೂಲವಾಗುವುದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಎಸ್. ಡಿ. ಎಂ. ಸಿ ರಾಜ್ಯ ನಿರ್ದೇಶಕ ಶರಣಬಸಪ್ಪ ದಾನಕೈ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ