೧. ಧರ್ಮ ದಂಗಲ್
ಅಯ್ಯಾ, ಇತ್ತ ಸ್ವಲ್ಪ ನೋಡಯ್ಯ
ಇಲ್ಲಿ ನಿತ್ಯವೂ ಯುದ್ಧ ನಡೆದಿದೆಯಯ್ಯ,
ಇದಾವ ಯುದ್ಧ ಎನುವಿರೇನಯ್ಯ,
ಇದು ಜಾತಿ ಯುದ್ಧವಯ್ಯ,
ಇದು ಧರ್ಮ ಯುದ್ಧವಯ್ಯ
ಇದು ಹಿಜಾಬ್ ಯುದ್ಧವಯ್ಯ,
ಇದು ಕೇಸರಿ ಪೇಟಾ ಯುದ್ಧವಯ್ಯ,
ಇದು ನೌಕರಿಗಾಗಿ ನಡೆದ ಯುದ್ಧ,
ಇದು ನೇಮಕಾತಿ ಯುದ್ಧ,
ಇದು ನೌಕರಿಗಾಗಿ ನಡೆದ ಯುದ್ಧ, ಇದು ಅಕ್ರಮ ನೇಮಕಾತಿ ಯುದ್ಧವಯ್ಯ,
ಇದು ವಾಕ್ಸಮರದ ಕಾಲವಯ್ಯ
ಇನ್ನೂ ಎಂಥ, ದಿನಗಳು ಬರಲಿವೆಯೋ
ಎಂದ ಶಿವ ಶಿವಾ!
೨. ಸಿಕ್ಕಿರುವ ಈ ಜನುಮನು
ವ್ಯರ್ಥ ಮಾಡದಿರಯ್ಯ,
ನಿನ್ನ ಸಾವಿನ ನಂತರವೂ
ನಿನ್ನ ಹೆಸರಿರುವಂತೆ ಇರಲಯ್ಯ,
ನಿನ್ನ ಸಾಧನೆಗಳೆಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
