ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೆಚ್ ಡಿ ಎಫ್ ಸಿ ಬ್ಯಾಂಕಿನಿಂದ ಕೃಷಿಕರಿಗೆ ಮುಂಗಾರಿನ ಸಾಲ ಸೌಲಭ್ಯ ಆನಂದ್ ಕೆ. ಎಸ್.

ಬಾಗಲಕೋಟೆ: HDFC ಬ್ಯಾಂಕ್ ಮತ್ತು ಸಿ ಎಸ್ ಸಿ ಸೇವಾ ಕೇಂದ್ರಗಳ ಸಹಯೋಗದಲ್ಲಿ ಮಾನ್ಸೂನ್ ಮೆಗಾಲೋನ್ ಕಾರ್ಯಕ್ರಮವನ್ನು, ನವನಗರದ ಶೆಟ್ಟರ್ ನಂಬರ್ 35 ರಲ್ಲಿರುವ ಬುಡ್ಡರ ಕಾಂಪ್ಲೆಕ್ಸ್ ನಲ್ಲಿರುವ ಸಿ ಎಸ್ ಸಿ ಜಿಲ್ಲಾ ಕೇಂದ್ರದಲ್ಲಿ ದಿನಾಂಕ 4, 6 2025 ರಂದು ಬುಧವಾರ ಆಯೋಜಿಸಲಾಗಿತ್ತು , ಕಾರ್ಯಕ್ರಮವನ್ನು ಎಚ್ ಡಿ ಎಫ್ ಸಿ , ರಾಜ್ಯ ವ್ಯವಸ್ಥಾಪಕ ಆನಂದ್ ಕೆ ಎಸ್ ವೀಡಿಯೊ ಕರೆ ಮೂಲಕ ಆನ್ಲೈನ್ ನಲ್ಲಿ ಚಾಲನೆ ನೀಡಿದರು , ಅನಂತರ HDFC ಬ್ಯಾಂಕಿನ ವಲಯ ಮುಖ್ಯಸ್ಥರಾದ ಮಹಾಂತೇಶ ಕರಿಗಾರ ಅವರು ಮಾತನಾಡಿ ಈ ಮಾನ್ಸೂನ್ (ಮುಂಗಾರು) ಮೆಗಾ ಲೋನ್ ಮೂಲಕ ಹಲವು HDFC ಸಾಲದ ಉತ್ಪನ್ನಗಳನ್ನು ರೈತರಿಗೂ ಮತ್ತು ಸಾಮಾನ್ಯ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿಮತ್ತು ವಿಶೇಷ ರಿಯಾಯಿತಿಯೊಂದಿಗೆ ಒದಗಿಸಲಾಗುವುದು ಹಾಗೂ ಇತರ ಸಾಲ ಸೌಲಭ್ಯಗಳ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು HDFC Bank ಹೊಂದಿದೆ ಎಂದು ತಿಳಿಸಿದರು.
ಸಿ ಎಸ್ ಸಿ ಜಿಲ್ಲಾ ವ್ಯವಸ್ಥಾಪಕ ಶ್ರೀರಾಮ್ ಎನ್. ಮಾತನಾಡಿ ಈ ಮೇಲಿನ ಎಲ್ಲಾ HDFC ಲೋನ್ ಸೇವೆಗಳನ್ನು ಜಿಲ್ಲಾದ್ಯಂತ ಸಿ ಎಸ್ ಸಿ ಸೇವಾ ಕೇಂದ್ರಗಳ ಮೂಲಕ ರೈತರ ಮನೆ ಬಾಗಿಲಿಗೆ ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಮತ್ತು ಯಾವುದೇ ನಮ್ಮ ಸ್ಥಳೀಯ ಉದ್ದಿಮೆದಾರರು ದೇಶದ ಬೆನ್ನೆಲುಬಾಗಿರುವ ರೈತರನ್ನು ಸಾವಲಂಬಿಯಾಗಿಸಲು ಎಚ್ ಡಿ ಎಫ್ ಸಿ ಬ್ಯಾಂಕಿನವರು ಮಾನ್ಸೂನ್ ಮೆಗಾ ಲೋನ್ ಅಡಿಯಲ್ಲಿ ರೈತರ ಉತ್ತೇಜನಗಳಿಗೆ ಸಾಲವನ್ನು ಕೊಡುತ್ತಿದ್ದು ನಮ್ಮ ಉದ್ದಿಮೆದಾರರು ಹೆಚ್ಚಿನ ರೈತರನ್ನು ಸಂಪರ್ಕಿಸಿ ಸಾಲವನ್ನು ಕೊಡುವುದರ ಮೂಲಕ ತಮ್ಮ ಆದಾಯದ ಜೊತೆಗೆ ರೈತರನ್ನು ಸಾವಲಂಬಿಯಾಗಿಸಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ HDFC ಸಿಬ್ಬಂದಿಗಳು ವೆಂಕಟೇಶ್ವರ ರಾವ್ ಚಿಲುಕುರಿ, ಕಾಶಿಮ್ ಅನವಲ್ , ರಾಮಣ್ಣ ಕುಂಬಾರ, ರಿಶಿಕೇಶ್, ಪ್ರತಿಭಾ ,ಮಹಾಂತೇಶ್, ಸುನಿಲ್ , ರಮೇಶ್ ಮುಂತಾದವರು ಮತ್ತು ಸಿ ಎಸ್ ಸಿ ವಿ ಎಲ್ ಈ ಗಳಾದಂತಹ ಹಬೀಬ್ ಎಂಡಿಗೇರಿ, ಆಶಿಶ್ ಪ್ರಭುಕರ್, ಚಂದ್ರಶೇಖರ್ ಪಟ್ರೋತ್ರಿ, ಶಾಹೀನ್ ರಕ್ಕಸಗಿ ಮುಂತಾದವರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ