
ಬಳ್ಳಾರಿ / ಕಂಪ್ಲಿ : ಶಾಸಕ ಜೆ. ಎನ್. ಗಣೇಶ ಅವರ 46ನೇ ಜನ್ಮದಿನದ ಪ್ರಯುಕ್ತ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮುಖಂಡರು ಕಾರ್ಯಕರ್ತರು ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಉಚಿತವಾಗಿ ಹಾಲು, ಹಣ್ಣು, ಬ್ರೆಡ್ ಗುರುವಾರ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಶ್ರೀನಿವಾಸ ರಾವ್ ಮಾತನಾಡಿ ಶಾಸಕ ಜೆ. ಎನ್. ಗಣೇಶ್ ಅವರು ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ನಾನಾ ಅಭಿವೃದ್ಧಿ ಕಾರ್ಯಗಳೊಂದಿಗೆ ಜನಮನ್ನಣೆ ಪಡೆದಿದ್ದಾರೆ ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಇಂತಹ ಶಾಸಕರು ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ, ಶಾಸಕರಿಗೆ ದೇವರು ಆರೋಗ್ಯ ಆಯಸ್ಸು ಸಮೃದ್ಧಿಯನ್ನು ನೀಡಲಿ ಎಂದು ಶುಭ ಹಾರೈಸಿದರು.
ನಂತರ ಪ್ರಧಾನ ಕಾರ್ಯದರ್ಶಿ ಬಿ. ರಘುನಾಯಕ್ ಮಾತನಾಡಿ ಕಳೆದ ಏಳು ವರ್ಷದಲ್ಲಿ ಕಂಪ್ಲಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ಶಾಸಕ ಜೆ. ಎನ್. ಗಣೇಶ್ ನೀಡಿದ್ದಾರೆ ಇವರ ಕಾಳಜಿಯಿಂದಾಗಿ ಕ್ಷೇತ್ರವು ಅಭಿವೃದ್ಧಿ ಹೊಂದುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಸದಸ್ಯರಾದ ಕೆ. ಎಸ್. ಚಾಂದ್ ಬಾಷಾ, ಲಡ್ಡು ಹೊನ್ನೂರ್ ವಲಿ, ವೀರಾಂಜನಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಪಿ. ಮೂಕಯ್ಯ ಸ್ವಾಮಿ, ಬಿ. ನಾರಾಯಣಪ್ಪ, ಸೈಯದ್ ಉಸ್ಮಾನ್, ಬಿ. ಜಾಫರ್, ರಾಮಾ ನಾಯ್ಡು, ರಾಜ್ಯ ದಿಶಾ ಕಮಿಟಿ ಸದಸ್ಯ ಡಾ. ಎ. ಸಿ. ದಾನಪ್ಪ, ಕೆ ಮನೋಹರ್, ಆರ್ ಪಿ ಶಶಿಕುಮಾರ್, ರಾಜಾಭಕ್ಷಿ, ರಾಮಚಂದ್ರ ಹೊನ್ನಾಳಿ ,ಗಂಗಾಧರ , ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ
ಮಸ್ತಾನವಲಿ ಕಡಪ, ಮೆಟ್ರಿ ಗಿರೀಶ, ಕುಮಾರ ,ದೇವಲಾಪುರ ಜಿ. ಮರೆಗೌಡ, ಅಂಜಿನಪ್ಪ , ಕೆ. ಶಿವಕುಮಾರ ಎಸ್. ಆರ. ವಲಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
