ಗದಗ : ಜಕ್ಕಲಿಯ SAJD ಹೈಸ್ಕೂಲ್ ನ 1998-99ನೇ ಸಾಲಿನ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭವನ್ನು ಜೂನ್ 14ರ ಶನಿವಾರದಂದು ಬೆಳಗ್ಗೆ 10ಗಂಟೆಗೆ ಜಕ್ಕಲಿಯ ಎಸ್. ಜೆ. ಡಿ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಬಿ. ಆರ್. ಗದಗಿನ ವಹಿಸಿಕೊಳ್ಳುವರು. ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿಗಳಾದ ರವೀಂದ್ರ ದೊಡ್ಡಮೇಟಿ ಉಧ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ನರೇಗಲ್ ಪೋಲಿಸ್ ಠಾಣೆಯ ಪಿಎಸ್ಐ ಶ್ರೀಮತಿ ಐಶ್ವರ್ಯಾ ವಿಶ್ವನಾಥ ನಾಗರಾಳ ಆಗಮಿಸುವರು.
ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ನಿವೃತ್ತ ಪ್ರೌಢಶಾಲೆ ಶಿಕ್ಷಕರು ಹಾಗೂ ಆಕಾಶವಾಣಿ ಕಲಾವಿದರಾದ ಸಿ.ಎಂ ವಡಗೇರಿ, ನಿವೃತ್ತ ಶಿಕ್ಷಕ ಟಿ.ಟಿ ದಾಸರ, ಡಿ.ಬಿ ತಳವಾರ, ವೀರಣ್ಣ ಮೆಣಸಿನಕಾಯಿ, ಸಿ.ವಿ ಗುತ್ತೆಪ್ಪನವರ್, ಎ.ಟಿ ಗುಳಗಣ್ಣವರ್, ಎಮ್.ವಾಯ್ ಹಳೇಮನಿ, ಎಸ್.ಆರ್ ಬಾಗಲಿ, ಎಸ್.ಬಿ ಬಳಗೇರ, ಎಸ್.ಟಿ ಕಳಸಾಪೂರ, ವಾಯ್.ಕೆ ಗುಡದೂರ, ದ್ವೀತಿಯ ದರ್ಜೆ ಸಹಾಯಕರಾದ ಎನ್.ಬಿ ಹಿರೇಮನಿ, ಡಿ ದರ್ಜೆ ನೌಕರರಾದ ಅಯ್ಯಪ್ಪ ತಿಲಗರ, ನಿವೃತ್ತ ಡಿ ದರ್ಜೆ ನೌಕರರಾದ ಎಚ್.ವಾಯ್ ಮಣ್ಣೋಡ್ಡರ ಈ ಎಲ್ಲಾ ಮಹನೀಯರು ಸನ್ಮಾನಗೊಳ್ಳಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಪ್ರೌಢಶಾಲೆ ಶಿಕ್ಷಕರಾದ ಈಶ್ವರ ಕುರಿ ನಡೆಸಿಕೊಡುವರು ಎಂದು 1998-99ನೇ ಸಾಲಿನ ವಿದ್ಯಾರ್ಥಿ ಬಳಗದವರು ಪ್ರಕಟಣೆಯಲ್ಲಿ ತಿಳಿಸಿ, ಸರ್ವರಿಗೂ ಈ ಮೂಲಕ ಸ್ವಾಗತವನ್ನು ಕೋರಿದ್ದಾರೆ.
ವರದಿ. ಅಂದಪ್ಪ ಮಾದರ
