ಕಲಬುರಗಿ/ ಜೇವರ್ಗಿ : ತಾಲೂಕಿನ ಗಂವಾರ ಗ್ರಾಮದ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನದಲ್ಲಿ ಏರ್ಪಡಿಸಿದ ವಿಶ್ವ ಪರಿಸರ ದಿನದ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕೆ ಕೆ ಆರ್ ಡಿ ಬಿ ಅಧ್ಯಕ್ಷರನ್ನು ಸಾಲು ಮರದ ತಿಮ್ಮಕ್ಕನ ವೃಕ್ಷೋದ್ಯಾನದಲ್ಲಿನ ಸೌಂದರ್ಯಮಯವಾದ ಹಸಿರು ಸಸ್ಯಗಳೇ ಸ್ವಾಗತ ಕೋರಿದವು, ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೇರೆರೆಯುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ವಿವಿಧ ಶಾಲೆಯಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡಿ ಎಲ್ಲರೂ ಸಸಿಗಳನ್ನು ನೆಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಈ ಸಸಿಗಳು ಅಥವಾ ಪರಿಸರ ಮಾನವನಿಗೆ ಎಲ್ಲವನ್ನೂ ನೀಡಿದೆ ಆದರೆ ದುರಾಸೆಯಿಂದ ಸಸಿಗಳನ್ನು ನಾಶ ಪಡಿಸುತ್ತಿದ್ದಾನೆ ಎಂದು ಗಾಂಧಿಯವರ ತತ್ವ ಸಿದ್ದಾಂತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂದೇಶಗಳನ್ನು ತಿಳಿಸುತ್ತಾ ಮುಂದುವರೆದು ಮಾತನಾಡಿ, ಇಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತಾಲೂಕ ಹಾಗೂ ಇತರರನ್ನು ಸ್ವಾಗತ ಕೋರಿ ಕಲ್ಯಾಣ ಕರ್ನಾಟ ಭಾಗದ ಅರಣ್ಯ ವಿಸ್ತೀರ್ಣಗಳ ಬಗ್ಗೆ ಎಳೆ-ಎಳೆಯಾಗಿ ಬಿಚ್ಚಿಟ್ಟರು ಕಲಬುರಗಿ 3.1 % ;ರಾಯಚೂರ 4.4 %;ಕೊಪ್ಪಳ 6.9; ಯಾದಗಿರಿ 8.9%; ಬೀದರ್ 8.4%;ಬಳ್ಳಾರಿ 10.1% ಇದೆ. ಇದರಲ್ಲಿ ಅತೀ ಕಡಿಮೆ ಅರಣ್ಯ ಪ್ರದೇಶ ಹೊಂದಿರುವುದು ಕಲಬುರಗಿ ಜಿಲ್ಲೆ ಹಾಗಾಗಿ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ 50 ಕೋಟಿ ಹಾಗೂ ಕೆಕೆ ಆರ್ ಡಿ ಬಿ ಯಿಂದ 50 ಕೋಟಿ ಒಟ್ಟು 100 ಕೋಟಿ ಅನುದಾನವನ್ನು ನಮ್ಮ ವಿಭಾಗಕ್ಕೆ ಮಿಸಲಿಟ್ಟಿದ್ದೇವೆ, ಇದೇನು ಸಣ್ಣ ವಿಷಯವಲ್ಲ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿದರು.
ನಿನ್ನೆ ನಡೆದ ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೃತ ಪಟ್ಟ ಕುಟುಂಬಗಳಿಗೆ ಸಾಂತ್ವಾನ ಹೇಳಿ ಕೆಲವು ನಿಮಿಷಗಳ ಕಾಲ ಮೌನಾಚರಣೆ ಮಾಡಿದರು.
ಈ ಹಿಂದೆ ಮಾರಣಾಂತಿಕ ವಿದ್ಯುತ್ ಅಪಘಾತದಿಂದ ಮೃತ ಪಟ್ಟ ಅವರಾದ ಗ್ರಾಮದ ವಿಶ್ವಾರಾಧ್ಯ ಪಟ್ಟೇದಾರ ಹಾಗೂ ಸಿಡಿಲು ಬಡೆದು ಮೃತ ಪಟ್ಟ ವ್ಯಕ್ತಿಯಾದ ಶ್ರೀನಾಥ ರೇವನೂರ ತಲಾ 5 ಲಕ್ಷ ಚೆಕ್ ಕೊಟ್ಟು ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕು ದಂಡಾಧಿಕಾರಿಗಳಾದ ಮಲ್ಲಣ್ಣ ಯಲಗೋಡ್ ಯಡ್ರಾಮಿ ತಾಲೂಕು ದಂಡಾಧಿಕಾರಿಗಳಾದ ಯಲ್ಲಪ್ಪ ಸುಭೇದಾರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ್ ದೇಸಾಯಿ, ಪಶು ವೈಧ್ಯಾಧಿಕಾರಿ ಶೋಭಾ ಸಜ್ಜನ್ ,ಸಿಪಿಆಯ್ ರಾಜೇಸಾಬ್ ನಧಾಫ್, ಕಾರ್ಯ ನಿರ್ವಾಹಕ ಅಧಿಕಾರಿ ರವಿಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬಮ್ಮನಹಳ್ಳಿ, ಅಲ್ಪ ಸಂಖ್ಯಾತರ ಇಲಾಖೆಯ ತಾಲೂಕ ಅಧಿಕಾರಿ ಹುಲಕಂಟರಾಯ ಸುಂಬಡ,ಇಸಿಓ ವಿಜಯಕುಮಾರ ರಾಠೋಡ್, ಟಿಪಿಓ ಶಿವಪುತ್ರ ಬೀರಗೋಂಡ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಾಂತಪ್ಪ ಕೂಡಲಗಿ, ಅಬಕಾರಿ ಅಧಿಕಾರಿ ರೇವಣಸಿದ್ದಪ್ಪ ಜೇರಟಗಿ ಹಾಗೂ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷ ಯಾಚೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಂಜು ಚವ್ಹಾಣ, ಉಪ ವಲಯ ಅರಣ್ಯಾಧಿಕಾರಿ ಮಾನು ಪವಾರ್ ಸಿಬ್ಬಂದಿಗಳಾದ ಸಿದ್ದನಗೌಡ, ತಿಪ್ಪಣ್ಣ, ಮಲ್ಲಿನಾಥ ಮತ್ತು ಕಂದಾಯ ಇಲಾಖೆಯ ಸಿಬಂದಿಗಳಾದ ಗೌಡಪ್ಪಗೌಡ ಪಾಟೀಲ್, ಪರಶುರಾಮ, ಗಂಗಾಧರ, ಹಣಮಂತ ರೆಡ್ಡಿ, ಅಂಬ್ರೇಶ ಚವ್ಹಾಣ ಹಾಗೂ ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.
ವರದಿ: ಚಂದ್ರಶೇಖರ ಪಾಟೀಲ್
