ಬಳ್ಳಾರಿ / ಕಂಪ್ಲಿ : ಸ್ಥಳೀಯ ಅಂಬೇಡ್ಕರ್ ವೃತ್ತದ ಬಳಿಯಲ್ಲಿರುವ ಬೃಹತ್ ಕಟೌಟ್ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಜನಪ್ರಿಯ ನಾಯಕ ಅಭಿವೃದ್ಧಿ ಹರಿಕಾರ ಶಾಸಕ ಜೆ. ಎನ್. ಗಣೇಶ ಅವರ ಜನ್ಮದಿನದ ಪ್ರಯುಕ್ತ ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡು ಮೂಲಕ ಸಂಭ್ರಮದಿಂದ ಜನ್ಮ ದಿನಾಚರಣೆ ಆಚರಿಸಿದರು.
ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ ಶಾಸಕ ಗಣೇಶ ಅವರು ಕಂಪ್ಲಿ ಕ್ಷೇತ್ರದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಒಂದಿಗೆ ನೆಚ್ಚಿನ ನಾಯಕರಾಗಿದ್ದಾರೆ ಇಂತಹ ಶಾಸಕರು ಸಿಕ್ಕಿರುವುದು ನಮ್ಮ ಕ್ಷೇತ್ರದ ಪುಣ್ಯ ಎಂದರು.
ನಂತರ ಮುಖಂಡರಾದ ಕ. ಮಾ. ಹೇಮಯ್ಯ ಸ್ವಾಮಿ, ,ಅರವಿ ಬಸವನಗೌಡ, ಮೂಕಯ್ಯಸ್ವಾಮಿ ಮಾತನಾಡಿ ಅವರಿಗೆ ಶಾಸಕರಿಗೆ ದೇವರು ಇನ್ನಷ್ಟು ಶಕ್ತಿ ಆಯಸ್ಸು ಆರೋಗ್ಯ ಕಲ್ಪಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಿ. ಪ್ರಸಾದ್ ಎಪಿಎಂಸಿ ಅಧ್ಯಕ್ಷ ಹಬೀಬ್ ರೆ ಹಮಾನ್, ಪುರಸಭಾ ಸದಸ್ಯ ಲಡ್ಡು ಹೊನ್ನೂರವಲಿ, ಮುಖಂಡರಾದ ಬಿ. ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ, ಮೆಟ್ರಿ ರಾಜ, ಬಳೆ ಮಲ್ಲಿಕಾರ್ಜುನ, ಪ್ರಮೋದ್ ಭಟ್ಟಾರಿ, ಬಿ. ವಿ. ಗೌಡ, ಸಣಾಪುರ ರೇಣುಕಪ್ಪ, ಬಿ. ಸಿದ್ದಪ್ಪ, ಕೆ. ರಮೇಶ, ತಿಮ್ಮಪ್ಪ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
