
ಬಳ್ಳಾರಿ / ಕುರುಗೋಡು : ಭಾರತ ಹಾಗೂ ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾಡಳಿತ – ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ / ಅಸಾಂಕ್ರಾಮಿಕ ರೋಗಗಳ ಘಟಕ, ತಾಲೂಕು ಪಂಚಾಯತ್ ಕುರುಗೋಡು, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಹಾಗು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕುರುಗೋಡು ಸಂಯುಕ್ತಾಶ್ರಯದಲ್ಲಿ ತಂಬಾಕು ರಹಿತ ದಿನ ದಿನಾಚರಣೆಯನ್ನು ಆಚರಿಸಲಾಯಿತು.
ಈ ವರ್ಷದ ಧ್ಯೇಯ ವಾಕ್ಯವಾದ ” ಆಕರ್ಷಕ ಉತ್ಪನ್ನಗಳು – ಕರಾಳ ಉದ್ದೇಶಗಳು” ಎಂಬುದರ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಿಂದ ಸಮುದಾಯ ಆರೋಗ್ಯ ಕೇಂದ್ರ, ಮುಖ್ಯ ವೃತ್ತದ ಮೂಲಕ ಪುನಃ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದವರೆಗೆ ಜಾಗೃತಿ ಘೋಷ ವಾಕ್ಯಗಳನ್ನು ಕೂಗುವ ಮುಖಾಂತರ ತಂಬಾಕನ್ನು ತ್ಯಜಿಸುವಲ್ಲಿ ಪಣತೊಡಬೇಕೆಂದು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ದಂತ ವೈದ್ಯಾಧಿಕರಾದ ಡಾ. ಗಾಯತ್ರಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಕಚೇರಿ ಅಧೀಕ್ಷಕರಾದ ಲೋಕೇಶ್ ಪಂಡಿತ್,
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಂದ್ರ, ಶರಣಬಸವ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಡಿ ಸುನಿತಾ, ನೀಲಾವತಿ, ಎನ್ ಸಿ ಡಿ ವಿಭಾಗದಿಂದ ಶೇಖರ್ ಹೆಚ್, ಕೆ ಅಬ್ದುಲ್ ಸುಭಾನ್, ಶಿವರಾಜ್, ನೇತ್ರಾವತಿ ,
ಐಸಿಟಿಸಿ ವಿಭಾಗದಿಂದ ಎನ್. ಕರಿಬಸವ, ಎ ಬಿ ಎ ಆರ್ ಕೆ ವಿಭಾಗದಿಂದ ಶರಣಬಸವ ನವೀನ್ ಕುಮಾರ ಆರ್ ಕೆ ಎಸ್ ಕೆ ವಿಭಾಗದಿಂದ ಮಹಬೂಬ್ ಭಾಷಾ ಸೇರಿದಂತೆ ಶಾಲೆಯ ಎಲ್ಲಾ ಗುರುವೃಂದ, ಆಸ್ಪತ್ರೆಯ ಆಶಾ ಕಾರ್ಯಕರ್ತೆಯರು, ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
