
ಗದಗ/ ನರಗುಂದ :ಪಟ್ಟಣದ ಪೋಲೀಸ್ ಠಾಣೆಯ ಆವರಣದಲ್ಲಿ ಶಾಂತಿ ಸಭೆಯನ್ನು ದಿ. 4/6/2025 ರಂದು ಬುಧವಾರ ಸಂಜೆ 5:00 ಘಂಟೆಗೆ ಏರ್ಪಡಿಸಲಾಗಿತ್ತು.
ಇಂದು ಬಕ್ರೀದ್ ಹಬ್ಬದ ನಿಮಿತ್ಯವಾಗಿ ಪೋಲಿಸ್ ಇಲಾಖೆ ಶಾಂತಿ ಸಮಿತಿಯ ಸಭೆ ಹಮ್ಮಿಕೊಂಡಿದ್ದು. ಈ ಸಭೆಯಲ್ಲಿ ಸ್ಥಳೀಯ ಚುನಾಯಿತ ಹಾಗೂ ನಾಮನಿರ್ದೇಶಿತ ಜನಪ್ರತಿನಿಧಿಗಳು,ಅಂಜುಮನ್ ಎ ಇಸ್ಲಾಂ ಸಂಸ್ಥೆ ನರಗುಂದ ಪದಾಧಿಕಾರಿಗಳು, ಎಲ್ಲಾ ಸಮುದಾಯದ ಮುಖಂಡರು, ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು, ಹಾಗೂ ನಾಗರಿಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ನರಗುಂದ ಪೋಲಿಸ್ ಉಪವಿಭಾಗಾಧಿಕಾರಿ ಡಿ.ವಾಯ್.ಎಸ್.ಪಿ. ಮಾನ್ಯ ಶ್ರೀ ಪ್ರಭುಗೌಡ ಸಾಹೇಬರು ರವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ನರಗುಂದ ಪೋಲೀಸ್ ಠಾಣೆಯ ಸಿ.ಪಿ.ಐ.ಮಾನ್ಯ ಶ್ರೀ ಮಂಜುನಾಥ ನಡುವಿನಮನಿ ಸಾಹೇಬರು ಮಾತನಾಡಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆಯಿಂದ ಆಚರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಮಾನ್ಯ ಶ್ರೀ ಸೋಲಾಪುರ ಸಾಹೇಬರು, ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರು ಜನಾಬ್ ಮಹೀಮ್ ಐ.ಪಿ.ಚಂದೂನವರ, ಹಿರಿಯರು ಶಿವಾನಂದ ಮುತ್ತವಾಡ, ಜನಾಬ್ ಅಬ್ದುಲ್ ಸಮದ್ ಮುಲ್ಲಾ ಜೀ, ಅಪ್ಪಣ್ಣಗೌಡ್ರು ನಾಯ್ಕರ, ಅಮ್ಜದ್ ಖಾಜಿ, ದಸ್ತಗೀರಸಾಬ ನಾಲಬಂದ, ಹಾಜಿ ದಾವಲಸಾಬ ದಾಟ್ನಾಳ, ಇಮಾಮಸಾಬ ನದಾಫ,ಅಬ್ದುಲಸಾಬ ಮುಲ್ಲಾ, ವಿಜಯ ಚಲವಾದಿ, ಬೀರಪ್ಪ ಸನ್ನಿ, ಅಹಮ್ಮದ್ ಪಠಾಣ, ಮಕ್ತಂಮಸಾಬ ಹವಾಲ್ದಾರ, ಮತ್ತಿತರರು ಭಾಗಿಯಾಗಿದ್ದರು.
- ಕರುನಾಡ ಕಂದ
