ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಕ್ರೀದ್ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ

ಗದಗ/ ನರಗುಂದ :ಪಟ್ಟಣದ ಪೋಲೀಸ್ ಠಾಣೆಯ ಆವರಣದಲ್ಲಿ ಶಾಂತಿ ಸಭೆಯನ್ನು ದಿ. 4/6/2025 ರಂದು ಬುಧವಾರ ಸಂಜೆ 5:00 ಘಂಟೆಗೆ ಏರ್ಪಡಿಸಲಾಗಿತ್ತು.
ಇಂದು ಬಕ್ರೀದ್ ಹಬ್ಬದ ನಿಮಿತ್ಯವಾಗಿ ಪೋಲಿಸ್ ಇಲಾಖೆ ಶಾಂತಿ ಸಮಿತಿಯ ಸಭೆ ಹಮ್ಮಿಕೊಂಡಿದ್ದು. ಈ ಸಭೆಯಲ್ಲಿ ಸ್ಥಳೀಯ ಚುನಾಯಿತ ಹಾಗೂ ನಾಮನಿರ್ದೇಶಿತ ಜನಪ್ರತಿನಿಧಿಗಳು,ಅಂಜುಮನ್ ಎ ಇಸ್ಲಾಂ ಸಂಸ್ಥೆ ನರಗುಂದ ಪದಾಧಿಕಾರಿಗಳು, ಎಲ್ಲಾ ಸಮುದಾಯದ ಮುಖಂಡರು, ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು, ಹಾಗೂ ನಾಗರಿಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ನರಗುಂದ ಪೋಲಿಸ್ ಉಪವಿಭಾಗಾಧಿಕಾರಿ ಡಿ.ವಾಯ್.ಎಸ್.ಪಿ. ಮಾನ್ಯ ಶ್ರೀ ಪ್ರಭುಗೌಡ ಸಾಹೇಬರು ರವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ನರಗುಂದ ಪೋಲೀಸ್ ಠಾಣೆಯ ಸಿ.ಪಿ.ಐ.ಮಾನ್ಯ ಶ್ರೀ ಮಂಜುನಾಥ ನಡುವಿನಮನಿ ಸಾಹೇಬರು ಮಾತನಾಡಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆಯಿಂದ ಆಚರಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಮಾನ್ಯ ಶ್ರೀ ಸೋಲಾಪುರ ಸಾಹೇಬರು, ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರು ಜನಾಬ್ ಮಹೀಮ್ ಐ.ಪಿ.ಚಂದೂನವರ, ಹಿರಿಯರು ಶಿವಾನಂದ ಮುತ್ತವಾಡ, ಜನಾಬ್ ಅಬ್ದುಲ್ ಸಮದ್ ಮುಲ್ಲಾ ಜೀ, ಅಪ್ಪಣ್ಣಗೌಡ್ರು ನಾಯ್ಕರ, ಅಮ್ಜದ್ ಖಾಜಿ, ದಸ್ತಗೀರಸಾಬ ನಾಲಬಂದ, ಹಾಜಿ ದಾವಲಸಾಬ ದಾಟ್ನಾಳ, ಇಮಾಮಸಾಬ ನದಾಫ,ಅಬ್ದುಲಸಾಬ ಮುಲ್ಲಾ, ವಿಜಯ ಚಲವಾದಿ, ಬೀರಪ್ಪ ಸನ್ನಿ, ಅಹಮ್ಮದ್ ಪಠಾಣ, ಮಕ್ತಂಮಸಾಬ ಹವಾಲ್ದಾರ, ಮತ್ತಿತರರು ಭಾಗಿಯಾಗಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ