ಯಾದಗಿರಿ/ ಗುರುಮಠಕಲ್: ವಿಶ್ವ ಪರಿಸರ ದಿನ ಅಂಗವಾಗಿ ಗುರುಮಠಕಲ್ ಪಟ್ಟಣದ ಇಂದಿರಾನಗರ ಶಾಲೆಯಲ್ಲಿ ತಾಲೂಕಿನ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಬಾಲಪ್ಪ ಸಿರಿಗೆಂ ಮತ್ತು ಶಾಲಾ ಶಿಕ್ಷಕರು, ಮಕ್ಕಳು ಸಸಿ ನೆಟ್ಟು ಪರಿಸರ ದಿನಚಾರಣೆ ಆಚರಿಸಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ” ಏಕ್ ಪೆಡ್ ಮಾ ಕೆ ನಾಮ್ 2.0 ” ಅಭಿಯಾನದ ಅಡಿಯಲ್ಲಿ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ದೇಶದಾದ್ಯಂತ ಪ್ರಧಾನಮಂತ್ರಿಗಳ ಆದೇಶದಂತೆ ಎಲ್ಲಾ ಶಾಲೆಗಳಲ್ಲಿ ಆಚರಿಸಲಾಗುತ್ತಿದೆ ಎಂದು ಬಾಲಪ್ಪ ಸಿರಿಗೆಂ ತಿಳಿಸಿದ್ದಾರೆ.
ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಗುರುಗಳಾದ ನಾಗೇಶ್ ಅವರು ಪ್ರಕೃತಿಯು ನಮಗೆ ಕೊಡುವುದನ್ನು ನಾವು ಆನಂದಿಸುತ್ತೇವೆ, ಆದರೆ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಾವು ಮರೆಯಬಾರದು ಹಸಿರನ್ನು ಬೆಳೆಸೋಣ, ಭೂಮಿಯನ್ನು ಉಳಿಸೋಣ ಎಂದು ಹೇಳಿದರು.
ಶಾಲಾ ಶಿಕ್ಷಕರಾದ ರಮೇಶ್ ಹಾಗೂ ಅಡುಗೆ ಸಹಾಯಕರು ಮಕ್ಕಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
