ಗುರುಮಠಕಲ್/ ಚೆಪೆಟ್ಲಾ: ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಂತಿ ನಿಕೇತನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಪ್ರಕೃತಿ ಮಾತೆಯನ್ನು ನಾವು ರಕ್ಷಿಸಿದರೆ ಪ್ರಕೃತಿ ಮಾತೆ ನಮ್ಮನ್ನು ರಕ್ಷಿಸುತ್ತಾಳೆ, ಪರಿಸರವಿದ್ದರೆ ನಾವು ಎಂಬುದನ್ನು ಅರಿತು ಪರಿಸರವನ್ನು ಪ್ರೀತಿಸೋಣ ಬೆಳೆಸೋಣ ಎಂಬ ಸಂದೇಶವನ್ನು ಮಕ್ಕಳು ನೀಡಿದರು.
ವರದಿ: ಜಗದೀಶ್ ಕುಮಾರ್ ಭೂಮಾ
