ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ವಿಜಯಪುರ ರೈಲ್ವೆ ನಿಲ್ದಾಣಕ್ಕೆ ನಾಮಕರಣಕ್ಕೆ ಮನವಿ

ವಿಜಯಪುರ / ಇಂಡಿ:ಡಾ. ಬಿ ಆರ್ .ಅಂಬೇಡ್ಕರರು ವಿಜಯಪುರ ನಗರಕ್ಕೆ ಭೇಟಿ ನೀಡಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋದ ಹಾಗೂ ಸಮಗ್ರ ಹರಿಜನರನ್ನು ಒಂದುಗೂಡಿಸಿ ವಿಜಯಪುರದ ರಾಣಿ ಬಗೀಚಿನಲ್ಲಿ ಹರಿಜನರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ್ದು ಐತಿಹಾಸಿಕ ಹಾಗೂ ರೋಮಾಂಚನಕಾರಿ ಕ್ಷಣವಾಗಿದ್ದು, ಇದೇ ಸಂದರ್ಭದಲ್ಲಿ ಬೀಳಗಿಯ ಸೋಮನಗೌಡ ಫಕೀರ ಗೌಡ ಪಾಟೀಲ್ ಇವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯದಲ್ಲಿ ಅವರ ಪರವಾಗಿ ವಾದ ಮಾಡಿ ಅವರಿಗೆ ಆಗಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ತಪ್ಪಿಸಿದ್ದು ಅವರ ಕಾನೂನು ಪಾಂಡಿತ್ಯವನ್ನು ಪ್ರತಿಯೊಬ್ಬರು ಕೂಡಾ ಮೆಚ್ಚಲೇಬೇಕಾದ ವಿಷಯವಾಗಿದ್ದು, ಇಂತಹ ಹತ್ತು ಹಲವಾರು ಐತಿಹಾಸಿಕ ಕ್ಷಣಗಳಿಗೆ ವಿಜಯಪುರ ನಗರ ಸಾಕ್ಷಿಯಾಗಿದ್ದು ಇಂಥಹ ಐತಿಹಾಸಿಕ ಘಟನೆಗಳಿಂದ ತಳ ಸಮುದಾಯದ ಯುವಕರು ಪ್ರೇರೇಪಣೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಎಲ್ಲಾ ಕಾರಣಗಳಿಂದ ಹಾಗೂ ಬಾಬಾ ಸಾಹೇಬರು ಬಂದು ಹೋದ ಹೆಜ್ಜೆಗಳ ಸವಿನೆನಪಿಗೋಸ್ಕರ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಮಹಾಮಾನತಾವಾದಿ, ಸಂವಿಧಾನ ಶಿಲ್ಪಿ ಡಾ . ಬಿ ಆರ್ ಅಂಬೇಡ್ಕರ್ ರ ಹೆಸರನ್ನು ನಾಮಕರಣ ಮಾಡಬೇಕೆಂದು ವಿಜಯಪುರ ಜಿಲ್ಲೆಯ ಭೀಮ್ ಸರಕಾರ ಸಂಘಟನೆಯ ಅಭಿಪ್ರಾಯವಾಗಿದೆ ಆದ್ದರಿಂದ ಮಾನ್ಯ ಸಚಿವರು ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಐತಿಹಾಸಿಕ ನಗರದ ರೇಲ್ವೆ ನಿಲ್ದಾಣಕ್ಕೆ ಡಾ| ಬಾಬಾಸಾಹೇಬರ ಅಂಬೇಡ್ಕರ ರೈಲು ನಿಲ್ದಾಣ ಎಂದು ನಾಮಕರಣ ಮಾಡಲು ಭೀಮ್ ಸರಕಾರ ತಾಲೂಕು ಅಧ್ಯಕ್ಷ ಆನಂದ ಅಗರಖೇಡ ಹಾಗೂ ಸಂಘಟನೆಯ ಮೂಲಕ ನಿನ್ನೆ ಇಂಡಿ ತಾಲೂಕು ಉಪ ವಿಭಾಗಧಿಕಾರಿಗಳಾದ ಅನುರಾಧಾ ವಸ್ತ್ರದ್ ರವರಿಗೆ ಭೀಮ್ ಸರಕಾರ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀಮ್ ಸರಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ನಾಯ್ಕೋಡಿ, ತಾಲೂಕು ಸಂಚಾಲಕರಾದ ರಾಹುಲ್ ಮನಗೂಳಿ, ಅರವಿಂದ್ ಕಾಂಬಳೆ, ಮಹೇಶ್ ಶಿವಶರಣ, ಮೇಘರಾಜ್ ವಾಲಿಕಾರ್, ಶಿವಾನಂದ ಹರಿಜನ್, ಸೋಮು ಹಳ್ಳಿ, ಆಕಾಶ್ ಕಾಂಬಳೆ, ತುಕಾರಾಂ ಪವರ್, ಉದಯ್ ಪವರ್ ಉಪಸ್ಥಿತರಿದ್ದರು.

ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ