ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಸಿರೂರ ಗ್ರಾಮದಲ್ಲಿ ಶ್ರೀಲಕ್ಷ್ಮಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಜರುಗಿತು.
ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸರ್ವ ಕತ್ತಿ ಕುಟುಂಬಸ್ಥರು ಸೇರಿ ಶ್ರೀ ಲಕ್ಷ್ಮಿ ದೇವಿಯ ಮoದಿರ ನಿರ್ಮಾಣ ಮಾಡಿ ಶ್ರೀ ಲಕ್ಷ್ಮಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಕಳಸಾರೋಹಣ ಆಳಂದ ತಾಲೂಕಿನ ನಿಂಬರ್ಗಾ ಶ್ರೀಮಠದ ನೀಲಕಂಠ ಮಹಾ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕಡಣಿ ಗ್ರಾಮದ ಸರ್ವ ಕತ್ತಿ ಕುಟುಂಬ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿತ್ತಲಸಿರೂರ ಗ್ರಾಮದ ಗ್ರಾಮಸ್ಥರು ತಾಯಂದಿರು ಹಾಗೂ ಶ್ರೀ ಲಕ್ಷ್ಮಿ ದೇವಿ ಅರ್ಚಕರಾದ ಶ್ರೀಮಂತ ವಾಲಿಕಾರ್ ಮತ್ತು ಆಲಮೇಲ ತಾಲೂಕಿನ ಕಡಣಿ ಗ್ರಾಮದ ಸರ್ವ ಕತ್ತಿ ಮನೆತನದ ಬಂಧುಗಳು ಭಾಗಿಯಾಗಿದ್ದರು.
ವರದಿ. ಹಣಮಂತ ಚ. ಕಟಬರ್
