ಕಲಬುರಗಿ/ ಚಿತ್ತಾಪುರ : ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ನೇಹ, ಸೌಹಾರ್ದತೆಯಿಂದ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ 7 ಗಂಟೆಯಿಂದ ಪಟ್ಟಣ ಹಾಗೂ ವಿವಿಧ ಗ್ರಾಮಗಳ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದುಲ್ ಅಝಹಾ ನಿಮಿತ್ತ ವಿಶೇಷ ನಮಾಜ್ ಮತ್ತು ಇಮಾಮಗಳಿಂದ ವಿಶೇಷ ಉಪನ್ಯಾಸದ ಮೂಲಕ ದೇಶದ ಏಕತೆ ಸುಭದ್ರತೆಗಾಗಿ ಪ್ರಾರ್ಥನೆ ಮಾಡಲಾಯಿತು.
ನಂತರ ಬಾಹರಪೇಟ್ ಸಮೀಪದ ಈದ್ಗಾ ಮೈದಾನದಲ್ಲಿ ಮೌಲಾನ ಸಿದ್ಧೀಕ್ ಮಾತನಾಡಿ, ದ್ವೇಷ, ಮದ ಮತ್ಸರ ಹಾಗೂ ಗುರು ಹಿರಿಯರಿಗೆ ಮತ್ತು ವಿಶೇಷವಾಗಿ ತಂದೆ ತಾಯಿಗಳಿಗೆ ಅತ್ಯಂತ ಗೌರವಿತವಾಗಿ ಕಾಣುವ ಮೂಲಕ ದೇವರನ್ನು ಮೆಚ್ಚಿಸಬೇಕು ಎಂದು ಕರೆ ನೀಡಿದರು.
ತನ್ನ ಮನಸ್ಸುಗಳನ್ನು ಹತೋಟಿಯಲ್ಲಿಟ್ಟು ಅಸೂಯೇ, ಆಸೆ, ದುರಾಸೆಗಳಿಗೆ ಬರೆ ಹಾಕಿ ತ್ಯಾಗ ಮತ್ತು ಬಲಿದಾನ ಮಾಡಿ ಪರಸ್ಪರ ಪ್ರೀತಿ, ಸಮಾನತೆಯಿಂದ ಬಡವರ ನೆರವಿಗೆ ಧಾವಿಸುವ ಕಾಳಜಿ ಹೊಂದುವ ಮನಸ್ಥಿತಿ ಹೊಂದುವುದು ಮುಖ್ಯವಾಗಿದ್ದು, ಅನ್ಯಾಯವನ್ನು ತಡೆಯುವಂತವರಾಗಬೇಕು ಎಂದರು.
ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು
ವರದಿ ಮೊಹಮ್ಮದ್ ಅಲಿ, ಚಿತ್ತಾಪುರ
