ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬುಡಕಟ್ಟು ಸಮುದಾಯಗಳಿಂದ ಅರಣ್ಯ ರಕ್ಷಣೆ ಸಾಧ್ಯವಾಗಿದೆ: ಅರುಣ್ ದೇಸಾಯಿ

ರಾಯಚೂರು/ ಸಿಂಧನೂರು :ಅನಾದಿ ಕಾಲದಿಂದಲೂ ಗಿಡ-ಮರಗಳೇ ತಮ್ಮ ದೇವರೆಂದು ನಂಬಿಕೊಂಡು ಬಂದಿರುವ ಬುಡಕಟ್ಟು ಮತ್ತು ಅಲೆಮಾರಿ ಜನಾಂಗಗಳಿಂದ ಇಲ್ಲಿಯವರೆಗೆ ಅರಣ್ಯ ರಕ್ಷಣೆಯಾಗಿದೆ ಎಂದು ತಹಶೀಲ್ದಾರ್ ಅರುಣ್ ಹೆಚ್. ದೇಸಾಯಿ ಅಭಿಪ್ರಾಯ ಪಟ್ಟರು.
ಅವರು ನಗರದ ಅಂಬೇಡ್ಕರ್ ಕಾಲೋನಿಯ ಸಿಂಧೊಳ್ಳು ಅಲೆಮಾರಿ ಜನಾಂಗದ ಹೊಸ ಬಡಾವಣೆಯಲ್ಲಿ ಅಕ್ಷರ-ವೈಭವ ಫೌಂಡೇಶನ್, ವನಸಿರಿ ಫೌಂಡೇಶನ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ, ಬಡಾವಣೆಯಲ್ಲಿ 100-ಸಸಿ ನೆಡುವ ಕಾರ್ಯಕ್ರಮ ಹಾಗೂ ಜೂನ್-5ರಂದು ಜನಿಸಿದ ಶಿಕ್ಷಕ ದಂಪತಿ ಶಾಂತಾ ಮತ್ತು ವೀರೇಶ ಗೋನವಾರ ಇವರ ಸುಪುತ್ರ ವೈಭವ ಈತನ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಚಾಲನೆ ನೀಡಿ ಮಾತನಾಡುತ್ತಾ, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳು ನೀರು ಮತ್ತು ಗಿಡ-ಮರಗಳ ಪರಿಸರವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸಿ ಸಂರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಂತಹ ಬಡಾವಣೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುತ್ತಿರುವುದು ಅರ್ಥಪೂರ್ಣ ಜೊತೆಗೆ ಜ್ಞಾನಾರ್ಜನೆಗೆ ಅನುಕೂಲವಾಗಲೆಂದು ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಇತರೆ ಲೇಖನ ಸಾಮಾಗ್ರಿಗಳನ್ನು ನೀಡುತ್ತಿರುವುದು ಅಭಿನಂದನೀಯ ಕಾರ್ಯ. ಶ್ರಮ ಸಂಸ್ಕೃತಿಯನ್ನು ನಂಬಿ ಜೀವನಸಾಗಿಸುತ್ತಿರುವ ಸಿಂಧೊಳ್ಳು ಜನಾಂಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು. ತಮ್ಮ ಕುಟುಂಬದ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕೊಡಿಸಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಲು ತಂದೆ-ತಾಯಿಗಳು, ಸಮುದಾಯದ ಹಿರಿಯರು ಶ್ರಮಿಸಬೇಕು. ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವೈಭವನ ಮುಂದಿನ ಜೀವನ ವೈಭಯುತವಾಗಿರಲಿ ಶುಭ ಹಾರೈಸಿದರು.
ರಾಜ್ಯ ಪ್ರಶಸ್ತಿ-ಪುರಸ್ಕೃತ ವನಸಿರಿ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮಾತನಾಡುತ್ತಾ, ಸಿಂಧೊಳ್ಳು ಅಲೆಮಾರಿ ಜನಾಂಗದ ಬಡಾವಣೆಯಲ್ಲಿ ಸಸಿಗಳನ್ನು ನೆಡುತ್ತಿರುವುದು ಒಳ್ಳೆಯ ಕೆಲಸ. ಶಿಕ್ಷಕ ದಂಪತಿಗಳ ಕೆಲಸಕ್ಕೆ ನಮ್ಮ ಸಹಕಾರವಿದೆ. ನೆಟ್ಟಿರುವ ಸಸಿಗಳನ್ನು ತಮ್ಮ ಮಕ್ಕಳಂತೆ ಪಾಲನೆ-ಪೋಷಣೆ ಮಾಡಿಬೆಳೆಸಬೇಕು. ಇದಕ್ಕೆ ನಮ್ಮ ವನಸಿರಿ ಫೌಂಡೇಷನ್ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಡಾ. ಬಿ. ಆರ್. ಅಂಬೇಡ್ಕರ ಯುವಕ ಮಂಡಳಿಯ ಅಧ್ಯಕ್ಷರಾದ ಹನುಮೇಶ ಕರ್ನಿ ಮಾತನಾಡುತ್ತಾ, ಶಿಕ್ಷಕ ದಂಪತಿಗಳು ತಮ್ಮ ಮಗನ ಹುಟ್ಟು ಹಬ್ಬವನ್ನು ಸಮಾಜದ ಕಟ್ಟಕಡೆಯ ಅಲೆಮಾರಿ ಜನಾಂಗದ ಮಕ್ಕಳ ನಡುವೆ ಆಚರಿಸಿಕೊಳ್ಳುತ್ತಿರುವುದು ಸ್ತುತ್ಯಾರ್ಹ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸಲಿಂಗಪ್ಪ ಅವರು ಮಾತನಾಡುತ್ತಾ, ಜಾಗತಿಕ ತಾಪಮಾನದ ಪರಿಣಾಮ ನಮ್ಮ ವಾತಾವರಣದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟಲು ಹೆಚ್ಚೆಚ್ಚು ಗಿಡ-ಮರಗಳನ್ನು ಬೆಳೆಸಿ ಪರಿಸರ ಸಮತೋಲವನ್ನು ಕಾಪಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಆರ್‌ಪಿ ರವಿ ಪವಾರ ಮಾತನಾಡುತ್ತಾ, ಈ ವರ್ಷ ಭಾರತ ಸರ್ಕಾರವು ಅಮ್ಮನ ಹೆಸರಿನಲ್ಲಿ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಬೆಳಸಬೇಕು ಎನ್ನುವ ಸಂದೇಶವನ್ನು ಸಾರಿದೆ. ಅದರಂತೆ ನಾವೆಲ್ಲರೂ ಗಿಡಗಳನ್ನು ನೆಟ್ಟು ಪೋಷಿಸಿ, ಬೆಳೆಸಬೇಕು ಎಂದರು.
ನಿವೃತ್ತ ಮುಖ್ಯಗುರು ಹಾಗೂ ಜಿಲ್ಲಾ ಚುಟುಟಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಭೋಜಿ ಮಾತನಾಡಿ, ಪ್ರತಿ ವರ್ಷವೂ ಹುಟ್ಟು ಹಬ್ಬದ ಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಪರಿಸರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡುವ ಮೂಲಕ ವಿಶಿಷ್ಟವಾಗಿ ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಈ ದಂಪತಿಗಳು ಆಚರಿಸುತ್ತಿರುವುದು ಅನುಕರಣೀಯ ಎಂದರು.
ಎ.ಐ.ಎಮ್.ಎಸ್.ಎಸ್‌ನ ಜಿಲ್ಲಾ ಕಾರ್ಯದರ್ಶಿ ಸರೋಜಾ ಗೋನವಾರ, ಕನಕನಗರ ಸಿ.ಆರ್.ಪಿ ಹನುಮಂತ, ಟಬಿಪಿ ಕ್ಯಾಂಪ್ ಸಿ.ಆರ್.ಪಿ ಚೆನ್ನವೀರಗೌಡ, ಯುವ ಮುಖಂಡ ನಿರುಪಾದಿ ನಾಗಲಾಪುರ, ಪ್ರಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮದಾಸ ಮಾತನಾಡಿದರು.
ವೇದಿಕೆಯ ಮೇಲೆ ವಿರುಪಾಪುರ ಪ್ರೌಢಶಾಲೆಯ ಮುಖ್ಯಗುರು ರಮಾದೇವಿ ಶಂಭೋಜಿ, ಅಂಬೇಡ್ಕರ ನಗರ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರಾದ ನಾಗರಾಜ ಕೆ, ಕನಕನಗರ ಶಾಲೆಯ ಮುಖ್ಯಗುರು ಮಲ್ಲಪ್ಪ, ಶಿಕ್ಷಕ ದಂಪತಿಗಳಾದ ಶಾಂತಾ-ವೀರೇಶ ಗೋನವಾರ, ಶಿಕ್ಷಕರಾದ ರವಿಚಂದ್ರ, ಕ.ರಾ. ಸಿಂಧೊಳ್ಳು ಸಮಾಜ ಕಲ್ಯಾಣ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಮಣ್ಣ ಸಿಂಧೊಳ್ಳು, ಸಮುದಾಯ ಹಿರಿಯ ಮುಖಂಡರಾದ ಸಿದ್ದಪ್ಪ, ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಂಬಯ್ಯ, ಸಮಾಜ ಹಿರಿಯರು, ಯುವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ