ರಾಜ್ಯದ ಮುಖ್ಯಮಂತ್ರಿಯಾದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು ಎಷ್ಟು ಸರಿ ಅಥವಾ ನಾಯಕ ಸಮಾಜದ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಮುಗಿಸುವ ಪ್ರಾಮಾಣಿಕ ಷಡ್ಯಂತರವು ಒಂದು ತಿಳಿಯುತ್ತಿಲ್ಲ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ದಡ್ಡತನ ಅಸಡ್ಡೆಯಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬೇಕಿತ್ತು. ಆದರೆ ವಾಲ್ಮೀಕಿ ನಾಯಕ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಬೆಂಗಳೂರು ನಗರ ಆಯುಕ್ತರುವ ಶ್ರೀ ದಯಾನಂದ ಅವರ ಮೇಲೆ ಅಮಾನತು ಶಿಕ್ಷೆ ಕೊಡುವುದು ಯಾವ ನ್ಯಾಯ? ಎಂ. ಪಿ. ಚುನಾವಣೆಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ಲೂಟಿ ಮಾಡುವುದು ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿಗಳನ್ನು ಗ್ಯಾರೆಂಟಿ ಯೋಜನೆಗೆ ಉಪಯೋಗಿಸುವುದು ಬುಡಕಟ್ಟು ಸಚಿವಾಲಯಕ್ಕೆ ಸಚಿವರು ಇಲ್ಲದಂಗೆ ನೋಡಿಕೊಳ್ಳುವುದು ಸಿದ್ದರಾಮಯ್ಯನ ಸರ್ಕಾರದ ಸೇಡಿನ ರಾಜಕಾರಣದ ಭಾಗವಾಗಿದೆ.
ವಾಲ್ಮೀಕಿ ನಾಯಕ ಜನಾಂಗದ ಸಚಿವರುಗಳಿಗೆ ಶಾಸಕರುಗಳಿಗೆ ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಇಂತಹ ಅನಾಹುತಗಳು ಆಗಲು ಬಿಡುತ್ತಿದಿಲ್ಲ ಇವರಿಗೆ ಎಲ್ಲಿದೆ ನೈತಿಕತೆ ಹೂ ನಿಮ್ಮ ದರಿದ್ರ ರಾಜಕಾರಣಕ್ಕೆ.
ಸರಕಾರ ವಾಲ್ಮೀಕಿ ಜನಾಂಗವನ್ನು ಗುರಿಯಾಗಿಸಿಕೊಂಡಿದೆಯಾ? ಈ ಮುಂಚೆ ಪೊಲೀಸ್ ಅಧಿಕಾರಿಯಾದ ಶ್ರೀ ರವಿ ಡಿ ಚೆನ್ನಣ್ಣವರಿಗೆ ಎಷ್ಟು ಕಿರುಕುಳ ಕೊಟ್ಟಿರಿ ಎಂಥ ಸ್ಥಾನಮಾನಗಳನ್ನು ಕೊಟ್ಟಿದ್ದೀರಿ ಎಂಬುದು ಸಮಾಜಕ್ಕೆ ಗೊತ್ತಿದೆ ದಕ್ಷ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವುದಾದರೆ ಬೆಂಗಳೂರು ಘಟನೆಗೆ ಗ್ರಹ ಸಚಿವ ಕೂಡ ಅಷ್ಟೇ ಜವಾಬ್ದಾರಿ ಗ್ರಹ ಸಚಿವರನ್ನು 24 ಗಂಟೆಯಲ್ಲಿ ಸಚಿವ ಸ್ಥಾನದಿಂದ ಕಿತ್ತೊಗೆದು ಸರ್ಕಾರ ತನ್ನ ಗಟ್ಟಿತನ ತೋರಿಸಲಿ.
ಗುಬ್ಬಿ ಮೇಲೆ ಮಾತ್ರ ಬ್ರಹ್ಮಾಸ್ತ್ರ ಪ್ರಯೋಗ ಯಾಕೆ? ಅಥವಾ ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಇಲಾಖೆ ಮತ್ತು ಯೋಜನೆಗಳನ್ನು ಹಾಗೂ ಅಧಿಕಾರಿಗಳನ್ನು ಮುಗಿಸುವ ತಂತ್ರವು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿ ಡಿಕೆ ಶಿವಕುಮಾರ್ ಅವರೇ, 11 ಜನ ಅಮಾಯಕ ಜನರ ಸಾವಿಗೆ ಕಾರಣರಾಗಿದ್ದೀರಲ್ಲ ಮೊದಲು ನೀವು ರಾಜೀನಾಮೆ ಕೊಡಿ.
- ಯಮನೂರ ನಾಯಕ ಬುನ್ನಟ್ಟಿ ಉತ್ತರ ಕರ್ನಾಟಕ ವಾಲ್ಮೀಕಿ ಯುವ ನಾಯಕರು ನಾಯಕ ಸಮಾಜ ಕೊಪ್ಪಳ.
- ಕರುನಾಡ ಕಂದ
