ಬಳ್ಳಾರಿ / ಕಂಪ್ಲಿ : ನಗರ ಪ್ರದೇಶಗಳಲ್ಲಿ ಕ್ರಿಕೆಟ್ ಟೂರ್ನಿಗಳನ್ನು ಅಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಮೆರೆಯಿರಿ’ ಎಂದು ಪುರಸಭೆ ಸದಸ್ಯ ಆರ್. ಆಂಜನೇಯ ಹೇಳಿದರು. ಸ್ಥಳೀಯ 21ನೇ ವಾರ್ಡಿನ ಎಂ. ಡಿ ಕ್ಯಾಂಪಿನ ಹೊರವಲಯದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಯುವಕರ ಸಂಘದಿಂದ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡಾಪಟುಗಳು ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಲು ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿ ಯಾಗಲಿವೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಸಾಮರ್ಥ್ಯ ವೃದ್ದಿಯಾಗಲಿದೆ. ಕ್ರೀಡಾಪಟುಗಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲಿನ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್, ಹನುಮಾನ್ ಬಾಯ್ಸ್, ಡ್ರಾಗನ್ ಬಾಯ್ಸ್, ತಲಾ ಬಾಯ್ಸ್, ಒಜಿಯೋ ಬಾಯ್ಸ್, ವಿಕೆ ಜೂನಿಯರ್ ತಂಡವು ಪಾಲ್ಗೊಂಡವು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಪ್ರಥಮ 10 ಸಾವಿರ ಜತೆಗೆ ಕಪ್ , ದ್ವಿತೀಯ 5 ಸಾವಿರ ಕಪ್, ಉಳಿದ ತಂಡಗಳಿಗೆ ಸಮದಾನಕರ ಬಹುಮಾನ ವಿತರಿಸಲಾಗುವುದು ಎಂದರು.
ಇಲ್ಲಿನ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಮುಖಂಡರಾದ ಎನ್. ಗಂಗಣ್ಣ, ಶೇಖರ, ತಂಡದ ನಾಯಕರಾದ ಭೀಮಾ, ಕಾಶಿ, ಲೋಕೇಶ, ಅಶೋಕ, ಅಂಗಡಿ ಅಂಜಿನಯ್ಯ, ನರಸಿಂಹ ಸೇರಿದಂತೆ ಕ್ರೀಡಾಪಟುಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
