ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿಯಲ್ಲಿ ಅಬ್ಬಬ್ಬಾ ಏನ್ ಟ್ರಾಫಿಕ್ ಗುರು ಜನರು ಸುಸ್ತೋ..ಸುಸ್ತು…

ಬೆಳಗಾವಿ : ಅಥಣಿ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಇದರಿಂದ ಅಥಣಿಯಲ್ಲಿ ಟ್ರಾಫಿಕ್ ಕಿರಿಕಿರಿ ಬಹಳ ಉಂಟಾಗುತ್ತಿದೆ. ಇದರಿಂದ ಹಳ್ಳಿಗಳಿಂದ ಬಂದ ವ್ಯಾಪಾರಸ್ಥರಿಗೆ ತುಂಬಾ ಅನಾನುಕೂಲವಾಗುತ್ತಿದೆ, ಎಲ್ಲಿ ನೋಡಿದರಲ್ಲಿ ಜನರು ತಮ್ಮ ವಾಹನಗಳನ್ನು ನಿಲುಗಡೆ ಮಾಡಿ ಹೋಗಿಬಿಡುತ್ತಾರೆ. ಇದರಿಂದ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಬಹಳ ಉಂಟಾಗುತ್ತಿದೆ. ಬೈಪಾಸ್ ರಸ್ತೆ ಇಲ್ಲದ ಕಾರಣ ದೊಡ್ಡ ವಾಹನಗಳು ಅಥಣಿ ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಹೋಗಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಅಂಬೇಡ್ಕರ್ ವೃತ್ತದಲ್ಲಿ, ಶಿವಯೋಗಿ ವೃತ್ತದಲ್ಲಿ, ಬಸವೇಶ್ವರ ವೃತ್ತದಲ್ಲಿ, ಹಾಗೂ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆ ಎದುರಿಗೆ ಅಂತೂ ಹೇಳುತೀರದು ಸರ್ಕಾರಿ ಆಸ್ಪತ್ರೆ ಎದುರಿಗೆ 2 ರಿಂದ 3 ಬ್ಯಾಂಕುಗಳಿದ್ದು ಜನರು ತಮ್ಮ ಬ್ಯಾಂಕಿನ ವ್ಯವಹಾರಕ್ಕಾಗಿ ಬರುತ್ತಾರೆ. ಅವರ ವಾಹನವನ್ನು ರಸ್ತೆ ಮೇಲೆಯೇ ನಿಲ್ಲಿಸಿ ಹೋಗಿ ಬಿಡುತ್ತಾರೆ ಇದರಿಂದ ದೊಡ್ಡ ದೊಡ್ಡ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದರಿಂದ ವಾಹನಗಳಿಗೆ ದೊಡ್ಡ ಕಿರಿಕಿರಿಯಾಗುತ್ತದೆ ಅದಲ್ಲದೆ ಟ್ರಾಫಿಕ್ ಕೂಡಾ ಸಹ ಆಗುತ್ತದೆ. ಅಥಣಿಯ ಗಾಂಧಿ ಮಾರ್ಕೆಟನಲ್ಲಂತೂ ಒಮ್ಮೆ ಟ್ರಾಫಿಕ್ ಆದರೆ ಅರ್ಧ ಗಂಟೆವರೆಗೂ ಟ್ರಾಫಿಕ್ ಸರಿ ಹೋಗುವುದಿಲ್ಲ
ಮತ್ತು ಅಂಬೇಡ್ಕರ್ ವೃತ್ತದಿಂದ ಮುರುಗೇಂದ್ರ ಬ್ಯಾಂಕಿನ ವರೆಗೆ ರಸ್ತೆ ಚಿಕ್ಕದ್ದಾಗಿದ್ದರಿಂದ ಮೋಟರ್ ಸೈಕಲ್ ಸವಾರರಂತೂ ರೋಡ್ ಎರಡೂ ಬದಿಯಲ್ಲಿ ತಮಗೆ ಎಲ್ಲಿ ಬೇಕಾದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಹೋಗಿ ಬಿಡುತ್ತಾರೆ.
ಪುರಸಭೆಯವರಂತೂ ಕಾಟಾಚಾರಕ್ಕೆ ಒಂದೂವರೆ ತಿಂಗಳ ಹಿಂದೆ ಇದಕ್ಕೆ ಸಂಬಂಧಪಟ್ಟ ಚರ್ಚೆ ಮಾಡಿ ಕಾನೂನುಗಳನ್ನು ಮಾಡಿದರು ಆದರೆ ಇನ್ನೂವರೆಗೆ ಅದು ಯಾವುದೇ ರೀತಿಯ ಕಾರ್ಯರೂಪಕ್ಕೆ ಬಂದಿಲ್ಲ.
ಇದನ್ನು ನಿಯಂತ್ರಣ ಮಾಡಬೇಕಾದ ಪುರಸಭೆ ಅಧಿಕಾರಿಗಳು ಆರಾಮಾಗಿದ್ದಾರೆ. ಇಂಥ ಟ್ರಾಫಿಕ್ ಸಮಸ್ಯೆಗಳು ಅಥಣಿಯಲ್ಲಿ ಬಹಳ ಎದ್ದು ಕಾಣುತ್ತಿದೆ.
ಎಚ್ಚೆತ್ತುಕೊಳ್ಳಿ ಪುರಸಭೆಯ ಅಧಿಕಾರಿಗಳೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಆದಷ್ಟು ಬೇಗ ಕಾನೂನುಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಿ ಮತ್ತು ಇದಲ್ಲದೆ ಸಂಬಂಧಪಟ್ಟ ಬೇರೆ ಇಲಾಖೆಯವರು ಸಹ ಇದಕ್ಕೆ ಸಹಕರಿಸಬೇಕಾಗಿದೆ.

ವರದಿಗಾರ :ವಿಠ್ಠಲ ಖೋಕಾಟೆ, ಅಥಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ