ಬೆಳಗಾವಿ/ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕರಾದ ಲಕ್ಷ್ಮಣ್ ಸವದಿ ಅವರ ಕಾರು ಅಪಘಾತವಾಗಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.
ಕಾರ್ಯಕ್ರಮದ ನಿಮಿತ್ಯ ತೆರಳುವ ವೇಳೆ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಬಳಿ ಸಂಜೆ ವೇಳೆ ಈ ಅಪಘಾತವು ಸಂಭವಿಸಿದೆ.
ಅಪಘಾತದ ಬಳಿಕ ಶಾಸಕರಾದ ಲಕ್ಷ್ಮಣ್ ಸವದಿ ಅವರು ಕೆಳಗಿಳಿದು ವಾಹನ ಚಾಲಕನ ಆರೋಗ್ಯವನ್ನು ವಿಚಾರಿಸಿದ್ದಾರೆ.
ವಾಹನ ಸವಾರ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ
ಯಾವುದೇ ತರಹದ ತೊಂದರೆಗಳಾಗಿಲ್ಲ ಎಂದು ಮತ್ತು ನಾನು ಸುರಕ್ಷಿತವಾಗಿದ್ದೀನೆ ಎಂದು ಮಾಹಿತಿ ನೀಡಿದ್ದಾರೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿಗಾರರು : ವಿಠ್ಠಲ ಖೋಕಾಟೆ, ಅಥಣಿ
