ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕದ ಕಿರಣ್ ಬೇಡಿ :ಜಿಲ್ಲೆಯ ಮೊದಲ ಮಹಿಳಾ ಎಸ್. ಪಿ

ಬಳ್ಳಾರಿ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ.ಶೋಭಾರಾಣಿ ವಿ. ಜೆ. ಕಳೆದ ವರ್ಷದ ಜುಲೈ ನಲ್ಲಿ ಅಧಿಕಾರ ವಹಿಸಿಕೊಂಡರು.

ನಗರದ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನಿರ್ಗಮಿತ ಎಸ್‌.ಪಿ ರಂಜಿತ್‌ ಕುಮಾರ್‌ ಬಂಡಾರು ಅವರು ಡಾ. ಶೋಭಾರಾಣಿ ವಿ.ಜೆ.ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈಗ ಇವರು ರಾಜ್ಯದಲ್ಲಿ ಕರ್ನಾಟಕದ ಕಿರಣ್ ಬೇಡಿ, ಲೇಡಿ ಸಿಂಗಂ ಎಂದೇ ಪ್ರಸಿದ್ಧರಾಗಿದ್ದಾರೆ.
ಹಾಗಾದರೆ ಇವರ ಪರಿಚಯ ನೋಡೋಣ…

ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟಾದಾಗ ಎಸ್. ಪಿ. ಡಾ.ಶೋಭಾರಾಣಿ ವಿ.ಜೆ. ಭಾರೀ ಸುದ್ದಿಯಲ್ಲಿದ್ದರು.

ದರ್ಶನ್ ಜೈಲಿಗೆ ಎಂಟ್ರಿ ಕೊಟ್ಟಾಗ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

ಬಳ್ಳಾರಿ ಎಸ್‌ ಪಿ ಡಾ.ಶೋಭಾರಾಣಿ ವಿ. ಜೆ. ಅವರ ಬಗ್ಗೆ ಪರಿಚಯ

ಇವರನ್ನು ಕರ್ನಾಟಕದ ಕಿರಣ್ ಬೇಡಿ ಎಂದು ಕರೆಯಲಾಗುತ್ತಿದೆ.
ಡಾ. ಶೋಭರಾಣಿ ಐಪಿಎಸ್ ವಿ. ಜೆ.
ಇವರು ಬೆಂಗಳೂರು ಹೊರವಲಯದ ನೆಲಮಂಗಲದವರಾಗಿದ್ದು ತಾಯಿಗೆ ಮಗಳು ಡೆಂಟಿಸ್ಟ್ ಆಗಬೇಕೆಂಬ ಕನಸಿತ್ತು.
ಹೀಗಾಗಿ ತಾಯಿಯ ಕನಸನ್ನು ನೆರವೇರಿಸಲು 10ನೇ ತರಗತಿಯಾದ ನಂತರ ಡೆಂಟಿಸ್ಟ್ ವೈದ್ಯಾರಾಗುವ ಕನಸನ್ನು ಹೊತ್ತು ವಿದ್ಯಾಭ್ಯಾಸ ಮಾಡಿದರು ದಂತವೈದ್ಯೆ ಕೂಡಾ ಆದರು.
ಹಲವಾರು ವರ್ಷ ಡೆಂಟಿಸ್ಟ್ ಆಗಿ ಕೂಡ ಕೆಲಸವನ್ನು ಮಾಡಿದರು. ಆದರೆ ನಾಲ್ಕು ಗೋಡೆಗಳ ಮಧ್ಯೆ ಕೂತು ಕೆಲಸ ನಿರ್ವಹಿಸುವುದರಲ್ಲಿ ಅವರಿಗೆ ತೃಪ್ತಿ ಇರಲಿಲ್ಲ ಈ ನಡುವೆ ಮನೆಯವರು ಡಾ. ಶೋಭಾರಾಣಿ ಅವರಿಗೆ ಮದುವೆಯನ್ನು ಮಾಡಿದರು.
ಡಾ. ಶೋಭರಾಣಿ ಅವರಿಗೆ ಪೊಲೀಸ್ ಆಗುವ ಕನಸಿತ್ತು, ಈ ನಡುವೆ ಅವರಿಗೆ ಒಂದು ಮಗು ಕೂಡ ಆಯ್ತು ಒಂದು ಕಡೆ ಮಗು ಇನ್ನೊಂದು ಕಡೆ ಐಪಿಎಸ್‌ ಪರೀಕ್ಷೆ 2010ರಲ್ಲಿ ಅಂದ್ರೆ ತಮ್ಮ ಮಗುವಿಗೆ ಜಸ್ಟ್ ಒಂದು ವರ್ಷ ಇದ್ದಾಗ ಐಪಿಎಸ್‌ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಿದರು.
ಇವರು ಡೆಂಟಿಸ್ಟ್ ಓದಿದ್ದು ಐಪಿಎಸ್‌ ಪರೀಕ್ಷೆಗೆ ಯಾವ ರೀತಿಯ ಸಹಾಯಕ್ಕೆ ಬರ್ಲಿಲ್ಲ, ಸಣ್ಣ ಮಗು ಇದ್ದದರಿಂದ ಕೋಚಿಂಗ್ ಕ್ಲಾಸ್ ಗೆ ಹೋಗಲು ಆಗಲಿಲ್ಲ ಅದನ್ನೇ ಸವಲಾಗಿ ತೆಗೆದುಕೊಂಡು ಡಾ. ಶೋಭಾರಾಣಿ ಕಷ್ಟಪಟ್ಟು ಓದಿದರು. ಐಪಿಎಸ್‌ ಪ್ರಿಲಿಮ್ಸ್ ಹಾಗೂ ಮೆನ್ ಎಕ್ಸಾಮ್ ಪಾಸ್ ಮಾಡಿದ್ರು ಟ್ರೈನಿಂಗ್ ಗಾಗಿ ಸಣ್ಣ ಮಗುವನ್ನು ಬಿಟ್ಟು ಹೋಗಬೇಕಾದ ಅನಿವಾರ್ಯತೆ ಎದುರಾಯಿತು.
ಆದ್ರೂ ಛಲ ಬಿಡದ ಶೋಭರಾಣಿ ಟ್ರೈನಿಂಗ್ ಗೆ ಹೋದರು. 2016ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದರು.
ಮೊದಲಿಗೆ ಮಂಡ್ಯ ಡಿ ಎಸ್ ಪಿ ಆಗಿ ಕೆಲಸ ನಿರ್ವಹಣೆ ಇದಾದ್ಮೇಲೆ ಕಬ್ಬನ್ ಪಾರ್ಕ್ ಎಸ್ ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಪ್ರಮೋಷನ್ ಪಡೆದು ಹಾಸನದ ಹೆಚ್ಚುವರಿ ಎನ್ ಪಿ ಆಗಿ ಬೆಂಗಳೂರು ಪಶ್ಚಿಮ ಸಂಚಾರ (ಟ್ರಾಫಿಕ್) ಪೊಲೀಸ್‌ ವಲಯದ ಡಿಸಿಪಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಡಾ.ಶೋಭಾರಾಣಿ ವಿ.ಜೆ. ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದಕ್ಕೂ ಮೊದಲು ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುವರಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಬೆಸ್ಕಾಂ ವಿಚಕ್ಷಣ ದಳ, ಕೇಂದ್ರ ವಲಯ ಎಸಿಬಿಯ ಎಸ್‌ಪಿಯಾಗಿದ್ದರು. ಸದ್ಯ ಇವರು ಬಳ್ಳಾರಿಯ ಮೊದಲ ಮಹಿಳಾ ಎಸ್‌ಪಿಯಾಗಿದ್ದಾರೆ.

ಸವಾಲು ನಿಭಾಯಿಸಿದ್ದ ಡಾ. ಶೋಭಾರಾಣಿ ವಿ. ಜೆ.

2019ರ ಜನವರಿಯಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದಾಗ ಶೋಭಾರಾಣಿ ತುಮಕೂರು ಜಿಲ್ಲೆಯ ಹೆಚ್ಚುವರಿ ಎಸ್‌ಪಿಯಾಗಿದ್ದರು. ಶೋಭಾರಾಣಿಯವರು ಜಿಲ್ಲೆಯಲ್ಲಿ ನಿರಂತರ ಮೂರು ದಿನಗಳ ಕಾಲ ಬಂದೋಬಸ್ತ್‌ ಬಿಗಿಗೊಳಿಸಿ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಿದ್ದರು. ಇದಕ್ಕಾಗಿ ಭಾರಿ ಮೆಚ್ಚುಗೆಗೂ ಅವರು ಪಾತ್ರರಾಗಿದ್ದರು.

ದರ್ಶನ್ ಜೈಲಿಗೆ ಎಂಟ್ರಿ ಕೊಟ್ಟಾಗ ಸವಾಲಾಗಿದ್ದ ನಟ ದರ್ಶನ್‌ ಬಳ್ಳಾರಿ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ಶೋಭಾರಾಣಿಯವರು ಶಾಕ್ ಕೊಟ್ಟಿದ್ದರು. ಬೆಂಗಳೂರಿನಲ್ಲಿದ್ದಷ್ಟು ಫ್ರೀಯಾಗಿ ಇಲ್ಲಿರೋದಕ್ಕೆ ಆಗಲ್ಲ ಅನ್ನೋದು ಇದ್ರಿಂದ ನಟ ದರ್ಶನ್‌ ಗೊತ್ತಾಗಿತ್ತು.

ಇದರ ಜತೆಗೆ ಆನ್‌ಲೈನ್‌ ವಂಚನೆಗೆ ಜಿಲ್ಲೆಯಲ್ಲಿ ಬಹಳಷ್ಟು ಜನ ಕೋಟ್ಯಂತರ ಹಣ ಕಳೆದುಕೊಂಡಿದ್ದಾರೆ. ಇವುಗಳ ನಿಯಂತ್ರಣದ ನಿಟ್ಟಿಯಲ್ಲಿ ಶೋಭಾರವರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ.

ಸಾರ್ವಜನಿಕರ ವಲಯದಲ್ಲಿ ಉತ್ತಮ ಹೆಸರನ್ನು ಸಂಪಾದಿಸುತ್ತಿದ್ದಾರೆ.

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್, ಕಂಪ್ಲಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ