
ಗೋ ಹತ್ಯೆ ನಿಷೇಧ ಕಾಯ್ದೆಯ ಅಡಿಯಲ್ಲಿ ಕಠಿಣವಾಗಿ ಶಿಕ್ಷಿಸಿ – ಯಾದಗಿರಿ ಹಿಂದೂ ಫೈರ್ ಬ್ರ್ಯಾಂಡ್ ಶಿವಕುಮಾರ ಸುಕಲೂರು.
ಯಾದಗಿರಿ: ಕರ್ನಾಟಕ ಸರಕಾರದ ಆದೇಶದ ಅನ್ವಯ ಬಕ್ರೀದ್ ಹಬ್ಬದ ಪ್ರಯುಕ್ತ ಕುರಬಾನಿ ಹೆಸರಿನಲ್ಲಿ ಪ್ರಾಣಿಗಳ ವಧೆ ಹಾಗೂ ಅಕ್ರಮವಾಗಿ ಗೋವುಗಳ ಕಳ್ಳ ಸಾಗಾಣಿಕೆ ನಿಷೇಧ ಹೇರಲಾಗಿತ್ತು, ಆದರೂ ಕಳೆದ ಒಂದು ವಾರದಿಂದ ಜಿಲ್ಲೆಯ ಹಲವು ಕಡೆ ಅಕ್ರಮ ವಾಗಿ ಗೋವುಗಳ ಸಾಗಾಣಿಕೆ ತಡೆಯುವ ಕೆಲಸ ಯಾದಗಿರಿ ಬಜರಂಗದಳ ಕಾರ್ಯಕರ್ತರಿಂದ ಜರುಗಿದೆ, ನಿನ್ನೆ ದೊರೆತ ಮಾಹಿತಿ ಮೆರೆಗೆ ಗುರಸಣಗಿ ಗ್ರಾಮದಲ್ಲಿ ಮಿಂಚಿನ ಕಾರ್ಯಾಚರಣೆ ಮಾಡಿದ ಕಲಬುರಗಿ ವಿಭಾಗದ ಭಜರಂಗದಳ ಸಹ ಸಂಯೋಜಕರಾದ ಶಿವಕುಮಾರ ಸುಕಲೂರು ಹಾಗೂ ಯಾದಗಿರಿ ತಂಡ ನಿನ್ನೆ ಅಕ್ರಮವಾಗಿ ಗುರುಸುಣಗಿ ಹೊರ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಗೋ ಹತ್ಯೆ ಮಾಡುತ್ತಿದ್ದ ಪ್ರದೇಶದ ಮೇಲೆ ಕಾನೂನಿನ ಅಡಿಯಲ್ಲಿ ಪೊಲೀಸ್ ಪಡೆಯೊಂದಿಗೆ ದಾಳಿ ಮಾಡಲಾಯಿತು.
ಕೆಲ ವ್ಯಕ್ತಿಗಳು ಬಕ್ರೀದ್ ಹಬ್ಬದ ಪ್ರಯುಕ್ತ 20ಕ್ಕೂ ಹೆಚ್ಚು ಗೋವು ಕಟಾವು ಮಾಡಿ ಅಲ್ಲಿಂದ ಪಲಾಯನವಾಗಿದ್ದಾರೆ, ಕಾರ್ಯಚರಣೆ ಮಾಡಿದ್ದರಿಂದ 2 ಗೋವುಗಳ ರಕ್ಷಣೆ ಮಾಡಲಾಗಿದೆ.
ಗೋ ಮಾಂಸ, ಕೊಂಬು, ಮೂಳೆಗಳು ವಶಕ್ಕೆ. ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸಿ ಗೋ ಹಂತಕರನ್ನು ಗೋ ಹತ್ಯೆ ನಿಷೇಧ ಕಾಯ್ದೆಯ ಕಾನೂನು ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದು ಶಿವಕುಮಾರ್ ಸುಕಲೂರು ಕಲಬುರಗಿ ಬಜರಂಗದಳ ಸಹ ಸಂಯೋಜಕರು ಆಗ್ರಹಿಸಿದ್ದಾರೆ.
ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ವ್ಯಕ್ತಿ/ಸಮುದಾಯ ವಿರುದ್ಧ ಕ್ರಮ ತೆಗೆದುಕೊಳ್ಳದ ಇಲಾಖೆ ಜಿಲ್ಲೆಯ ನಾನಾ ಕಡೆ ಮೂಕ ಪ್ರಾಣಿಗಳ ಬಲಿದಾನ ಖಂಡನೀಯ ವಿಚಾರ. ಗೋವುಗಳು ಕೇವಲ ಹಿಂದೂ ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಕೇವಲ ಬಾಯಿ ರುಚಿಗಾಗಿ ಕಟುಕರು ಗೋವುಗಳನ್ನು ಈ ರೀತಿ ವಧೆ ಮಾಡಿರುವುದು ಅತ್ಯಂತ ಖಂಡನೀಯ ವಿಚಾರ ಇನ್ನಾದರೂ ಪೊಲೀಸ್ ಇಲಾಖೆ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು.
ವರದಿ: ಜಗದೀಶ್ ಕುಮಾರ್ ಭೂಮಾ
