ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ ಹುಣ್ಣಿಮೆ ಪ್ರಯುಕ್ತ ರೈತರ ಖರೀದಿ ಬಲು ಜೋರು

ಯಾದಗಿರಿ/ ಗುರುಮಠಕಲ್: ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸೋಮವಾರ ಗ್ರಾಮೀಣ ಭಾಗದಿಂದ ಬಂದ ರೈತರು ಎತ್ತುಗಳು ಸೇರಿದಂತೆ ವಿವಿಧ ಜಾನುವಾರುಗಳಿಗೆ ಶೃಂಗರಿಸಲು ಅಲಂಕಾರಿಕ ಸಾಮಗ್ರಿಗಳನ್ನು ಭರ್ಜರಿಯಾಗಿ ಖರೀದಿಸಿದರು.

ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಎತ್ತುಗಳೇ ಬೆನ್ನೆಲುಬು. ಅಧುನಿಕ ಕೃಷಿ ಯಂತ್ರಗಳು ಎಲ್ಲಾ ವಿಷಯಗಳಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ, ಒಂದು ಮಾತ್ರ ನಿಜ ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು ಮಾತ್ರ, ಗ್ರಾಮೀಣ ಭಾಗಗಳಲ್ಲಿ ಮೊದಲಿಂದಲೂ ಕೃಷಿಗೆ ಎತ್ತುಗಳೇ ಆಧಾರ, ಹೀಗಾಗಿ ರೈತರು ಎತ್ತುಗಳನ್ನು ಮನೆಯ ಸದಸ್ಯನಂತೆ ಕಾಣುತ್ತಾರೆ ರೈತರು ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ಕೃತಜ್ಞತೆ ಸಮರ್ಪಿಸುತ್ತಾರೆ.

ಎತ್ತುಗಳ ಅಲಂಕಾರಕ್ಕಾಗಿ ಕೊರಳಿಗೆ ಗಂಟೆ, ಮತಾಟಿ, ಮಗಡಾ, ಮೂಗುದಾರ, ಬಾರಕೋಲು, ಹಳದಿ, ಕೆಂಪು, ಹಸಿರು ಬಣ್ಣದ ವಾರ್ನಿಷ್‌, ಸರಜಂಗ ಸೇರಿದಂತೆ ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳನ್ನು ಸಾವಿರಾರು ರೈತರು ಖರೀದಿ ಮಾಡಿದರು.

ಚಂಡರೀಕಿ, ಪುಟಪಾಕ, ನಜರಾಪುರ, ಮಿನಸಾಪೂರ್, ಅಮ್ಮ ಪಲ್ಲಿ, ಗಾಜರಕೊಟ್, ಶಿವಪುರ, ಕಾಕಲವಾರ್, ಚೆಪೆಟ್ಲ, ಯಾನಾಗುಂದಿ ಸೇರಿದಂತೆ ನೆರೆಯ ತೆಲಂಗಾಣ ರಾಜ್ಯದ ಕಾನುಕುರ್ತಿ, ವಿಠಲಪುರ, ದಾಮರಗಿದ್ದ ಸೇರಿದಂತೆ ಅನೇಕ ತಾಂಡಾಗಳಿಂದ ಆಗಮಿಸಿದ್ದ ಅಪಾರ ರೈತರು ಬೇಕಾದ ಸಾಮಾನುಗಳನ್ನು ಖರೀದಿಸಿದರು.

ಮುಂಗಾರು ಬಿತ್ತನೆ ಸಿದ್ಧತೆಯಲ್ಲಿರುವ ರೈತರು ಇನ್ನೇನು ಎರಡು ದಿನದ ಅವಧಿಯಲ್ಲಿ ಬರುವ ಕಾರಹುಣ್ಣಿಮೆಯನ್ನು ಆಚರಿಸಿ ಬಿತ್ತನೆಯಲ್ಲಿ ನಿರತರಾಗುತ್ತಾರೆ. ಇದಕ್ಕೂ ಮುನ್ನ ಎತ್ತುಗಳಿಗೆ ಸಿಂಗರಿಸಿ ಪ್ರಮುಖ ಬೀದಿಗಳಲ್ಲಿಯೂ ಮೆರವಣಿಗೆ ನಡೆಸಿ ಸಂಭ್ರಮಿಸುತ್ತಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ