ಬೆಳಗಾವಿ: ಬೆಳಗಾವಿ ಲೋಕಾಯುಕ್ತ ವ್ಯಾಪ್ತಿಯ ಮೂರು ಕಡೆಗಳಲ್ಲಿ ಈ ಹಿಂದೆ ಕೆಲವು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಬೆಳಗಾವಿ ಲೋಕಾಯುಕ್ತ ಎಸ್. ಪಿ. ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿಯ ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬಾನಸಿ ರವರ ಬೆಳಗಾವಿ ವಿದ್ಯಾನಗರದಲ್ಲಿರುವ ಮನೆ ಹಾಗೂ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲಿಸಿದ ಸಂದರ್ಭದಲ್ಲಿ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬಾನಸಿ ನಿವಾಸದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು ಇದರಲ್ಲಿ 1,02,66,000 ರೂ ಮೌಲ್ಯದ ಅಕ್ರಮ ಪತ್ತೆಯಾಗಿದ್ದು 37,66 ಲಕ್ಷ ರೂಪಾಯಿ ಮೌಲ್ಯದ 4 ನಿವೇಶನಗಳು, 65 ಲಕ್ಷ ರೂಪಾಯಿ ಮೌಲ್ಯದ ಮನೆ 34,64 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ 10,60 ಲಕ್ಷ ರೂಪಾಯಿ ಮೌಲ್ಯದ ವಾಹನ ಪತ್ತೆಯಾಗಿದ್ದವು.
ಇಷ್ಟೆಲ್ಲಾ ಅಕ್ರಮಗಳು ಬಯಲಿಗೆ ಬಂದರೂ ಸಹ ಈ ಅಧಿಕಾರಿಯನ್ನು ಅಮಾನತ್ತು ಮಾಡದೆ ಸರಕಾರ ಭಂಡತನ ಮೆರೆದಿದ್ದು ನೋಡಿದರೆ ಭ್ರಷ್ಟ ಅಧಿಕಾರಿಗಳಿಗೆ ಸರಕಾರ ನೇರವಾಗಿ ಶ್ರೀರಕ್ಷೆ ನೀಡುತ್ತಿದ್ದು ಇದು ಖಂಡನೀಯ ಎಂದು ಬೆಳಗಾವಿ ಜಿಲ್ಲೆಯ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ಅವಶ್ಯಕ ಈ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅನೇಕ ಹೋರಾಟಗಳ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹೋರಾಟ ನಡೆಸುತ್ತಿದೆ, ಆದರೆ ಅಧಿಕಾರದಲ್ಲಿರುವ ರಾಜಕೀಯ ನಾಯಕರು, ಪಕ್ಷ ಇಂತಹ ಘಟನೆಗಳು ನಡೆದಾಗ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಅವರಿಗೆ ಪರೋಕ್ಷವಾಗಿ ರಕ್ಷಣೆ ನೀಡುತ್ತಿರುವುದು ನಾಚಿಕೆ ಗೇಡಿನ ಸಂಗತಿ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಜಿ ಕುಂಬಾರ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಖಂಡಿಸಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿರುವ ದೇವರಾಜ್ ಅರಸು ಅಭಿವೃದ್ಧಿ ನಿಗಮದ ಕಚೇರಿ ಮುಂದೆ ನಿಗಮದ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬಾನಸಿ ಯವರಿಗೆ ಕರ್ನಾಟಕ ರಾಷ್ಟ್ರ ಸಮೀತಿ ಪಕ್ಷದ ಬೆಳಗಾವಿ ಜಿಲ್ಲೆಯ ಪದಾಧಿಕಾರಿಗಳು ಸೈನಿಕರು ಬ್ರಷ್ಟ ಅಧಿಕಾರಿಗೆ ಸನ್ಮಾನಿಸಿ ಇನ್ನಾದರೂ ಉತ್ತಮ ಕಾರ್ಯ ನಿರ್ವಹಿಸಿ ಉತ್ತಮ ಆಡಳಿತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ಸಿದ್ದು ಕನಬುರಗಿ ಸರಕಾರಿ ಅಧಿಕಾರಿಗಳಿಗೆ ಸಾರ್ವಜನಿಕರು ಕಷ್ಟ ಪಟ್ಟು ದುಡಿದ ತೆರಿಗೆ ಹಣದಲ್ಲಿ ಸಂಬಳ ನೀಡುತ್ತಾರೆ ಇಲಾಖೆಯು ಈ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುತ್ತದೆ ಸರಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಸಾರ್ವಜನಿಕರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸ ಬೇಕಾದ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಸಂಬಳ ನನ್ನ ಹಕ್ಕು ಗಿಂಬಳ ನನ್ನ ತಾಕತ್ತು ಕೆಲಸ ನನ್ನ ಮರ್ಜಿ ಎನ್ನುವ ಹಂತಕ್ಕೆ ತಲುಪಿದ್ದು ವಿಷಾದನೀಯ ಸಂಗತಿ.
ಅಧಿಕಾರಿಗಳ ಭ್ರಷ್ಟಾಚಾರ ಕಂಡು ಬಂದಾಗಲಾದರೂ ಕ್ರಮ ಕೈಗೊಳ್ಳಬೇಕಾದ ಸರಕಾರ ಈ ರೀತಿ ವರ್ತನೆ ಮಾಡುತ್ತಿರುವುದು ನೋಡಿದರೆ ಇವರ ನೈತಿಕತೆ ಪ್ರಶ್ನೆ ಮಾಡುವ ಸಮಯ ಬಂದಿದ್ದು ಸಾರ್ವಜನಿಕರು ಈ ಕುರಿತು ಚಿಂತಿಸಿ ಒಳ್ಳೆಯ ಜನ ಪ್ರತಿ ನಿಧಿಗಳನ್ನು ಆರಿಸುವತ್ತ ಗಮನ ಹರಿಸಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಕುಮಾರ ಡೊಂಗರೆ, ಚಿಕ್ಕೋಡಿ ಗೌರವಾಧ್ಯಕ್ಷರಾದ ವಿನೋದ ಪಾಟೀಲ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಕಿತ್ತೂರ, ಕಾರ್ಯದರ್ಶಿ ಸಿದ್ದು ಬನ್ಸೋಡಿ, ಸಿದ್ದಪ್ಪ ಡಾಂಗೆ, ಸುರೇಶ ಭಜಂತ್ರಿ,
ತಾಲೂಕಾ ಯುವ ಘಟಕದ ಅಧ್ಯಕ್ಷ ಅಜಿತ ಧೋತರ, ತಾಲೂಕ ಅಧ್ಯಕ್ಷ ಸಂತೋಷ ಮಂಗಳಗಟ್ಟಿ, ಕಾರ್ಯದರ್ಶಿ ರಾಜು ಮಲಕೇರಿ, ದ್ಯಾಮಣ್ಣ ಕಿತ್ತೂರ, ಮುನ್ನಾ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ವರದಿ :ಭೀಮಸೇನ ಕಮ್ಮಾರ
