ಕಲಬುರಗಿ: ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜು ಇದ್ದಂತೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ರದ್ದು ಮಾಡಬೇಕು ಎಂದು ಕ. ರ. ವೇ (ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕ್ರಿಕೆಟ್ ಬೆಟ್ಟಿಂಗ್ನಿಂದ ಸಾವಿರಾರು ಯುವ ಕುಟುಂಬುಗಳು ಹಾಳಾಗಿ ಬೀದಿ ಪಾಲಾಗಿದ್ದು ಕಾರಣವೇ ದೂರದರ್ಶನದಲ್ಲಿ ಅನಗತ್ಯ ಪ್ರಚಾರ. ಬೇರೆ ಕ್ರೀಡೆಗಳಿಗೆ ಹೆಚ್ಚಿನ ಪ್ರಚಾರ ನೀಡದೆ ಕ್ರಿಕೆಟ್ಗೆ ಮಾತ್ರ ಹೆಚ್ಚು ಪ್ರಚಾರ ನೀಡಲಾಗುತ್ತಿದ್ದು, ಇದರಲ್ಲಿ ಇವರು ಭಾಗಿಯಾಗಿರುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಿಕೆಟ್ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸೌಲಭ್ಯ ಒದಗಿಸಬೇಕು, ಬೆಂಗಳೂರಿನಲ್ಲಿ 11 ಜನ ಸಾವನಪ್ಪಿದ್ದಕ್ಕೆ ದುಃಖ ವ್ಯಕ್ತಪಡಿಸಿ ಈ ಘಟನೆಗೆ ಸರಕಾರವೇ ನೇರ ಹೊಣೆ ಹೊತ್ತುಕೊಳ್ಳಬೇಕು, ಮುಖ್ಯಮಂತ್ರಿಗಳು ಯಾರ ಹೊಣೆ ಎನ್ನುವುದನ್ನು ನಿಗದಿ ಪಡಿಸಬೇಕು ಪರಿಹಾರ ನೀಡುವುದು ಸಮಸ್ಯೆಯ ಪರಿಹಾರವಲ್ಲ ಇಲ್ಲಿಯವರೆಗೂ ಕ್ರಿಕೆಟ್ ತಂಡದ ಒಬ್ಬರೂ 11 ಜನ ಸಾವಿನ ಬಗ್ಗೆ ಚಕಾರ ಎತ್ತಿಲ್ಲ, ಸರಕಾರ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಬೇಕು ಕೇವಲ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವುದರಿಂದ ಸಾವನ್ನಪ್ಪಿದವರಿಗೆ ಶಾಂತಿ ಸಿಗುವುದಿಲ್ಲ ಎಂದು ಅವರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
- ಕರುನಾಡ ಕಂದ
