ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿಮಾನ ಅತಿರೇಕವಾಗದಿರಲಿ

ಆಡಿದರು ಆಟ ಆ ಹನ್ನೊಂದು ಜನ..
ಏರಿದರು ಚಟ್ಟ ಈ ಹನ್ನೊಂದು ಜನ..

ಆಡಿದರು ಹನ್ನೊಂದು ಕ್ರಿಕೆಟ್ ಆಟ..
ಆಡಿದರು ಈ ಹನ್ನೊಂದು ವಿಧಿಯ ಆಟ..

ಅವರು ಆಡಿದರು ಕ್ರಿಕೆಟ್ ಮೈದಾನದಲ್ಲಿ..
ಇವರು ಮಡಿದರು ಕ್ರಿಕೆಟ್ ಮೈದಾನದಲ್ಲಿ..

ಅವರನ್ನು ಅಭಿನಂದಿಸಿದರು ಕುಂಕುಮವಿಟ್ಟು..
ಇವರನ್ನೂ ಬೀಳ್ಕೊಟ್ಟರು ವಿಭೂತಿಯಿಟ್ಟು..

ಅವರಿಗೆ ದೊರೆಯಿತು ಸಿ. ಎಂ ಪುರಸ್ಕಾರ..
ಇವರಿಗೆ ದೊರೆಯಿತು ಸಿ. ಎಂ. ಪರಿಹಾರ..

ಅವರನ್ನು ಸ್ವಾಗತಿಸಿದರು ಆನಂದ ಭಾಷ್ಪದಿ..
ಇವರನ್ನೂ ತೊರೆದರು ಅಶ್ರು ಸಂತರ್ಪದಿ..

ಅವರು ಹನ್ನೊಂದು ಇವರು ಹನ್ನೊಂದು..

ಆತ್ಮೀಯರೇ ನಮಸ್ಕಾರ ಮೇಲಿನ ಕವಿವಾಣಿ ಸತ್ಯವಲ್ಲವೇ? ಅಭಿಮಾನಿಗಳು ಹುಚ್ಚುತನ ಮೆರೆದರೆ ವಿಧಿಯು
ಹನ್ನೊಂದು ಜನರನ್ನು ಬಲಿ ಪಡೆಯುವ ಮೂಲಕ ಸಂಭ್ರಮದ ಮಧ್ಯೆ ಸಾವಿನ ಸೂತಕದ ಕರಿ ನೆರಳನ್ನು ಚೆಲ್ಲಿತು.

ಈ ಬಾರಿ ಕಪ್ ನಮ್ದೇ ಎಂದು ಸುಮಾರು ಹದಿನೆಂಟು ವರ್ಷದಿಂದ ಹೇಳುತ್ತಾ, ಜಾತಕ ಪಕ್ಷಿಯಂತೆ ಕಾಯುತ್ತಿರುವ ಆರ್. ಸಿ. ಬಿ. ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಭಿಮಾನಿಗಳು ಇಡೀ ರಾಜ್ಯವಷ್ಟೇ ಅಲ್ಲದೆ ದೇಶ್ಯಾದ್ಯಂತ ರಾತ್ರಿಯಿಡೀ ಸಂತೋಷದಿಂದ ಸಂಭ್ರಮಾಚರಣೆ ಮಾಡಿದರು.

ಈ ಸಂತೋಷ, ಸಂಭ್ರಮ ಹಂಚಿಕೊಳ್ಳುವಗೋಸ್ಕರ ನಮ್ಮ ರಾಜ್ಯದ ಸರ್ಕಾರ ದಿಢೀರನೆ ಆರ್.ಸಿ.ಬಿ ಆಟಗಾರರಿಗೆ ಬೆಂಗಳೂರಿಗೆ ಕರೆಸಿ ಸನ್ಮಾನ ಮಾಡುವ ಕಾರ್ಯಕ್ರಮ ಅಯೋಜನೆ ಮಾಡಿದರು. ವಿಪರ್ಯಾಸ ಎಂದರೆ ಕಾರ್ಯಕ್ರಮ ಮಾಡುವುದೇನು ಸರಿ ಆದರೆ ಅಯೋಜಕರು ಮುಂದಿನ ಘಟನೆ ಬಗ್ಗೆ ಪೂರ್ವಾಪರ ಯೋಚನೆ ಮಾಡದೆ ಹಾಗೂ ಪೊಲೀಸ್ ಇಲಾಖೆಯ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಎಷ್ಟು ಸರಿ?

ಕನ್ನಡ ನಾಡು ನುಡಿಗೆ ತನ್ನದೇ ಆದ ಅಸ್ಮಿತೆ ಹೆಮ್ಮೆ ಇದೆ. ಅದು ಕೇವಲ ನಮ್ಮೊಳಗಿನ ಒಂದು ರಾಜ್ಯದ ಮೇಲೆ ನಮ್ಮ ರಾಜ್ಯದ ಕ್ರಿಕೆಟ್ ತಂಡಕ್ಕೆ ಗೆಲುವಾದ ತಕ್ಷಣಕ್ಕೆ ನಾಡಿನ ಬದಲಾವಣೆಯಲ್ಲಿ ಯಾವುದೇ ಏರಿಳಿತಗಳಾಗುವುದಿಲ್ಲ ಅಂದ ಮಾತ್ರಕ್ಕೆ ಆಯೋಜಕರು ಇಷ್ಟೊಂದು ಸಂಭ್ರಮಾಚರಣೆ ನಡೆಸಿ ಸಾವಿನ ಬಾವಿಗೆ ಕೆಲವು ಕುಟುಂಬಗಳ ಕುಡಿಗಳನ್ನು ತಳ್ಳುವ ಅಗತ್ಯವೇನಿತ್ತು?. ಇದಕ್ಕೆಲ್ಲಾ ಯಾರು ಹೊಣೆ? ಸತ್ತವರು ತಮ್ಮ ಕುಟುಂಬವನ್ನು ತ್ಯಜಿಸಿ ಹೋದರು. ಮುಂದೆ ಅವರ ಕುಟುಂಬದ ಪರಿಸ್ಥಿತಿ ಬಗ್ಗೆ ಯಾರು ಯೋಚಿಸುವರು, ಆಯೋಜಕರಾ, ಆರ್ ಸಿ ಬಿಯವರಾ, ಅಥವಾ ರಾಜ್ಯ ಸರ್ಕಾರದವರಾ ಅನ್ನುವುದು ಯಕ್ಷಪ್ರಶ್ನೆ?

ಐಪಿಎಲ್ ಪಂದ್ಯಾವಳಿಗಳು ಕೇವಲ ಉದ್ದಿಮೆದಾರರು, ಬಂಡವಾಳಗಾರರು, ಮೋಜು ಮಸ್ತಿಯ ಆಟಗಳಾಗಿ ಸ್ವೀಕರಿಸುತ್ತಾರೆಯೇ ಹೊರತು ನಮ್ಮ ನಿಮ್ಮಂತೆ ಹುಚ್ಚು ಅಭಿಮಾನಿಗಳು ಆಗಲ್ಲ. ಅವರು ಆ ಕ್ಷಣದ ಅಭಿಮಾನಿಗಳೆನ್ನುವುದನ್ನು ಅರಿಯಬೇಕಾಗಿದೆ.

ಗಡಿಯಲ್ಲಿ ಸೈನಿಕ ಹುತಾತ್ಮನಾದರೂ, ಸಾಲದ ಕೂಪಕ್ಕೆ ಸಿಲುಕಿ ರೈತನ ಆತ್ಮಹತ್ಯೆಯಾಗುತ್ತಿದ್ದರೂ, ಅಮಾಯಕ ಮಹಿಳೆ ಮೇಲೆ ಅತ್ಯಾಚಾರವಾಗುತ್ತಿದ್ದರೂ, ಬಡತನ ತಾಂಡವಾಡುತ್ತಿದ್ದರೂ, ಯುವ ಸಮುದಾಯ ಉದ್ಯೋಗವಿಲ್ಲದೆ ದಾರಿ ತಪ್ಪುತಿದ್ದರೂ ಎಂದಿಗೂ ಮಾತನಾಡದ ಕ್ರಿಕೆಟಿಗರು ತನ್ನ ಕುಟುಂಬ ತನ್ನ ಬದುಕಿಗಾಗಿ ಸೀಮಿತರಾಗಿ ಯಾವುದೋ ಒಂದು ಪ್ರತಿಷ್ಠಿತ ಕಂಪನಿಯ ರಾಯಭಾರಿಗಳಾಗಿ ಹಣ ಗಳಿಸುವುದರಲ್ಲಿ ನಿರತರಾಗಿರುತ್ತಾರೆ. ಕೆಲವರ ಹೊರತಾಗಿ ಸಮಾಜಕ್ಕಾಗಿ ಇವರು ಕೊಡುಗೆಯೇನು ಇರುವುದಿಲ್ಲ.

ಹಾಗಾಗಿ ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ ನಿಮ್ಮಲ್ಲೊಂದು ನನ್ನ ವಿನಮ್ರ ಮನವಿ, ಇಂಥವರ ಸೋಲಿಗೆ ಗೆಲುವಿಗೆ ತಮ್ಮ ಅಭಿಮಾನವನ್ನು ತೋರಿ. ಆದರೆ ಅತಿರೇಕದ ಅಂಧಾಭಿಮಾನ ಪ್ರದರ್ಶಿಸಿ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳದಿರಿ, ನಿಮ್ಮನ್ನು ನಂಬಿ ನಿಮ್ಮ ಕುಟುಂಬವಿದೆ ಅನ್ನೋದನ್ನು ಮರೆಯದಿರಿ.

ಶರಣು ಶರಣಾರ್ಥಿ

(ಲಾಸ್ಟ ಲೈನ್ :-ಅಭಿಮಾನ ಅತಿರೇಕವಾಗದಿರಲಿ)

  • ಓಂಕಾರ ಪಾಟೀಲ
    ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ್
    ಮೋ :೬೩೬೦೪೧೩೯೩೩.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ