ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರ್​​ಸಿಬಿ ಮಾರಾಟ, 17,000 ಕೋಟಿ ರೂ.ಗೆ?ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?

ಬೆಂಗಳೂರು : ಐಪಿಎಲ್​​ನ ನೂತನ ಚಾಂಪಿಯನ್ ಎನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB- Royal Challengers Bangalore) ತಂಡವನ್ನು ಮಾರುವ ಸಾಧ್ಯತೆ ಇದೆ. ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ ಸದ್ಯ ಆರ್​​ಸಿಬಿಯ ಮಾಲಿಕತ್ವ ಹೊಂದಿದೆ. ಇದೀಗ ಫ್ರಾಂಚೈಸಿಯನ್ನು ಮಾರುವ ಬಗ್ಗೆ ಡಿಯಾಜಿಯೋ (Diageo) ಆಲೋಚಿಸುತತಿದೆ ಎಂದು ತಿಳಿದು ಬಂದಿದೆ. ಸಂಪೂರ್ಣವಾಗಿ ಮಾರುವುದೋ ಅಥವಾ ಭಾಗಶಃ ಮಾರುವುದೋ ಎಂಬುದನ್ನು ಯೋಚಿಸಲಾಗುತ್ತಿದೆ. ಈ ಬಗ್ಗೆ ಸಲಹೆಗಾರರ ಜೊತೆ ಡಿಯಾಜಿಯೋ ಸಮಾಲೋಚನೆ ನಡೆಸುತ್ತಿರುವುದು ಈ ವರದಿಯಲ್ಲಿ ತಿಳಿಸಲಾಗಿದೆ.

ಆರ್​​ಸಿಬಿ ಫ್ರಾಂಚೈಸಿ ಎರಡು ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್ ಇರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಅಂದರೆ ಬರೋಬ್ಬರಿ 17,000 ಕೋಟಿ ರೂ. ಮೊತ್ತಕ್ಕೆ ಯಾರಾದರೂ ಖರೀದಿಸಲು ಮುಂದಾದರೆ ಆರ್​​ಸಿಬಿಯನ್ನು ಸೇಲ್ ಮಾಡುವ ಸಾಧ್ಯತೆ ಇದೆ.

ಸದ್ಯ ಯಾವ ವಿಚಾರವೂ ಅಂತಿಮವಾಗಿಲ್ಲ. ಆರ್​​ಸಿಬಿಯನ್ನು ಮಾರಾಟ ಮಾಡಬಹುದು, ಅಥವಾ ಮಾಡದೇ ಹೋಗಬಹುದು. ಈಗಲೇ ಏನೂ ಹೇಳಲು ಆಗದು ಎಂದು ಈ ವರದಿಯಲ್ಲಿ ಮೂಲಗಳು ಹೇಳಿವೆ ಎನ್ನಲಾಗಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಯುನೈಟೆಡ್ ಸ್ಪಿರಿಟ್ಸ್ ಮಾಲಕ ಕಂಪನಿ. ಆದರೆ, ವಿಜಯ್ ಮಲ್ಯ ಅವರ ಬಳಿ ಇದ್ದ ಯುನೈಟೆಡ್ ಸ್ಪಿರಿಟ್ಸ್ ಅನ್ನು ಡಿಯಾಜಿಯೋ ಕಂಪನಿ ಖರೀದಿ ಮಾಡಿತ್ತು. ಈ ಮೂಲಕ ಆರ್​​ಸಿಬಿ ಮಾಲಕತ್ವ ಡಿಯಾಜಿಯೋದ್ದಾಗಿದೆ. ಈ ತಂಡದ ಮಾರಾಟ ಸಂಬಂಧ ಡಿಯಾಜಿಯೋ ಆಗಲೀ, ಯುನೈಟೆಡ್ ಸ್ಪಿರಿಟ್ಸ್ ಆಗಲೀ ತಮಗೆ ಹೇಳಿಕೆ ನೀಡಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಈ ಕುರಿತು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ