ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೋಮಯ್ಯ ಸ್ವಾಮಿಗಳ 28ನೇ ಪುಣ್ಯಾರಾಧನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿಯ
ಮರುಳ ಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28ನೇ ಪುಣ್ಯಾರಾಧನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ.

ರೋಣ ತಾಲೂಕಿನ ಸವಡಿ ಗ್ರಾಮದ ಸುಕ್ಷೇತ್ರ ಮರುಳಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28ನೇ ಪುಣ್ಯಾರಾಧನೆ ಅಂಗವಾಗಿ ಜೂನ್ 09 ರ ಸೋಮವಾರದಂದು ಸರ್ವಧರ್ಮಗಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

ಜೂನ್ 08ರ ರವಿವಾರದಂದು ರಾತ್ರಿ 9ಗಂಟೆಗೆ ವಿಶೇಷ ಭಜನಾ ಕಾರ್ಯಕ್ರಮಗಳು ಹಾಗೂ ಜೂನ್ 09ರಂದು ಬೆಳಗ್ಗೆ 05 ಗಂಟೆಗೆ ಮರುಳಸಿದ್ದೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಲಿಂಗದೀಕ್ಷೆ, ಅಯ್ಯಾಚಾರ ಕಾರ್ಯಕ್ರಮಗಳು ಜರುಗಿದವು. ನಂತರ 10ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀ ಸೋಮಯ್ಯ ಸ್ವಾಮಿಗಳ ಪುಣ್ಯತಿಥಿ ವಿಜೃಂಬಣೆಯಿಂದ ಜರುಗಿತು.
ನಂತರ ಮಧ್ಯಾಹ್ನ 12.15ಕ್ಕೆ ಪರಮಪೂಜ್ಯ ಮರುಳ ಸಿದ್ದೇಶ್ವರ ಸ್ವಾಮಿಗಳ ಹಾಗೂ ಪೂಜ್ಯ ಶಿವಲಿಂಗಯ್ಯ ಸ್ವಾಮಿಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹಗಳು ನಡೆದವು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಚಿತ್ರದುರ್ಗದ ಡಾ. ಬಸವಮೂರ್ತಿ ಮಾದರ ಚನ್ನಯ್ಯ ಮಹಾಸ್ವಾಮಿಗಳು,
ಕುಕನೂರು ತಾಲೂಕಿನ ಇಟಗಿಯ ಶಿವಶರಣ ಗದಿಗೆಪ್ಪಜ್ಜನವರು, ಕೋಡಿಹಳ್ಳಿ ಆದಿ ಜಾಂಬವ ಸಂಸ್ಥಾನಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮಿಗಳು, ಬೆನಾಳ ಹಿರೇಮಠದ ಸದಾಶಿವ ಶಿವಾಚಾರ್ಯರ ಸ್ವಾಮಿಗಳು, ಹುಬ್ಬಳ್ಳಿ ರಾಜ ವಿದ್ಯಾಶ್ರಮ ಶ್ರೋತ್ರಿಯ ಬ್ರಹ್ಮನಿಷ್ಠ ಷಡಕ್ಷರಿ ದೇವರು, ಹಂಪಿ ಮಾತಂಗಮುನಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮಿಗಳು, ಬಾದಾಮಿ ಶ್ರಿ ಅಂಬಾ ಆಶ್ರಮದ ಶ್ರೀ ಮಾತೋಶ್ರೀ ದಯಾಭಾರತಿ, ಬಸವಕಲ್ಯಾಣ
ಬಸವಪ್ರಭು ಸ್ವಾಮಿಗಳು, ಹಿರೇಸಿಂದೋಗಿ ಹೂವಯ್ಯ ಸ್ವಾಮಿಗಳು, ಬಿಸರಳ್ಳಿ ಮಳಿಯಯ್ಯ ಸ್ವಾಮಿಗಳು, ಲಕ್ಕುಂಡಿ ಹುಚ್ಚಯ್ಯ ಸ್ವಾಮಿಗಳು, ಹಿರೇಸಿಂಧೋಗಿ ನಾಗರಾಜ ಸ್ವಾಮಿಗಳು, ಸವಡಿ ಶಿವಲಿಂಗಯ್ಯ ಸ್ವಾಮಿಗಳು, ಲಕ್ಕುಂಡಿ ಶಿವಮುನಿ ಸ್ವಾಮೀಗಳು, ಯರಗೊಪ್ಪ ಚೌಡೇಶ್ವರಿದೇವಿ ಆರಾದಕರಾದ ನಾಗರಾಜ, ಸವಡಿ ಮಲ್ಲಜ್ಜನವರು, ಸವಡಿ ಸಂಗನಬಸಯ್ಯ ಸ್ವಾಮಿಗಳು, ಸವಡಿ ವೇ.ಮೂ. ಚಂದ್ರಶೇಖರಯ್ಯ ಹಿರೇಮಠ, ಕಾಂಗ್ರೆಸ್ ಪಕ್ಷದ ಯುವ ನಾಯಕ ಅಕ್ಷಯ ಐ ಪಾಟೀಲ ಸೇರಿದಂತೆ ನಾಡಿನ ಹರ, ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಿದವು. ವಿಷೇಶವಾಗಿ ಹುಲ್ಲೂರಿನ ದೇವಿ ಅರ್ಚಕರಾದ ರಾಮಕೃಷ್ಣ ಪೂಜಾರ ಇವರಿಂದ ಸಂಗೀತ ಮಹೋತ್ಸವ ಕಾರ್ಯಕ್ರಮ ನಡೆಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಚಿವರು, ಶಾಸಕರು, ರಾಜಕೀಯ ಧುರೀಣರು, ಸಾಹಿತಿಗಳು, ಚಿಂತಕರು, ದಾನಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ವಿವಿಧ ಭಜನಾ ಮಂಡಳಿಯವರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳ ಸಕಲ ಸದ್ಭಕ್ತರು ಆಗಮಿಸಿ, ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ಶ್ರೀಗಳ ದರ್ಶನ ಆಶೀರ್ವಾದ ಪಡೆದು ಪ್ರಸಾದವನ್ನು ಸ್ವೀಕರಿಸಿ ಮರುಳ ಸಿದ್ದೇಶ್ವರನಿಗೆ ಪಾತ್ರರಾದ ಭಕ್ತಾದಿಗಳು ಇದೇ ಸಂದರ್ಭದಲ್ಲಿ ಸಂಗಪ್ಪ ಹುನಸಿಮರದ, ಶಿದ್ದು ಎಸ್ ಹಲಗಿ, ಎಸ್ ಕೆ ನಡುವಿನಮನಿ, ಮೈಲಾರಪ್ಪ ಚಳ್ಳಮರದ, ಹಣಮಂತಪ್ಪ ಬೆಳವಟಗಿ, ಶಿವು ಬೆಳವಟಗಿ, ಶೇಖಪ್ಪ ಹಡಗಲಿ, ಪರಸಪ್ಪ ಪೂಜಾರ, ಶಿವಪ್ಪ ಮದಾರಿ, ಕನಕಪ್ಪ ಮಲ್ಲಾಪುರ, ಶರಣಪ್ಪ ಮಲ್ಲಾಪುರು, ದುರುಗಪ್ಪ ಮಲ್ಲಾಪುರ, ಬಸಪ್ಪ ಮಲ್ಲಾಪುರ, ಪ್ರೇಮವ್ವ ಹುನಸಿಮರದ ಗ್ರಾಂ. ಪಂಚಾಯಿತಿ ಸದಸ್ಯರು ಸವಡಿ ಇನ್ನೂ ಅನೇಕ ಬಕ್ತಾದಿಗಳು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ