ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಭಗೀರಥ ( ಉಪ್ಪಾರ) ಸಮಾಜದ ತಾಲೂಕು ಅಧ್ಯಕ್ಷ ಕಂಪ್ಲಿ ನಗರದ ನಿವಾಸಿ ಯು. ರುದ್ರಪ್ಪ (58) ಅನಾರೋಗ್ಯದಿಂದ ದೈವಾಧೀನರಾಗಿದ್ದಾರೆ.
ನಾಡ ಕಚೇರಿ ರುದ್ರಪ್ಪ ಎಂದೇ ಮನೆ ಮಾತಾಗಿದ್ದರು ಸೌಮ್ಯ ಸ್ವಭಾವದವರಾದ ಇವರು ನಗರದ ಡಾ. ಗುರುರಾಜ ಕ್ಲಿನಿಕ್ ನಲ್ಲಿ ಅವರ ಹತ್ತಿರ ಸುಮಾರು ವರ್ಷಗಳವರೆಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.
ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇಂದು ಅಂತಿಮ ಶವಸಂಸ್ಕಾರ 11/6/25 ಕಂಪ್ಲಿ ನಗರದಲ್ಲಿರುವ ರುದ್ರಭೂಮಿಯಲ್ಲಿ 3.30ಕ್ಕೆ ಮಧ್ಯಾಹ್ನ ಜರುಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್
