೧. ವ್ಯತ್ಯಾಸ.
ಅಂದು ಗುರು ಹಿರಿಯರನ್ನು
ಗೌರವಿಸುತ್ತಿದ್ದರು,
ಇಂದು ಅವರನ್ನು,
ಗುರಾಯಿಸುತ್ತಿದ್ದಾರೆ!
೨. ಕ್ಷಮೆ.
ತಿಳಿದೋ ತಿಳಿಯದೆಯೋ
ಮಾಡುತ್ತೇವೆ ನಾವೆಲ್ಲರೂ
ಒಂದಲ್ಲ, ಒಂದು ತಪ್ಪು,
ಯಾಕೆಂದರೆ ಇದ್ದೇ ಇದೆಯಲ್ಲ
ಕೇಳಿದರೆ ಆಯ್ತು ಒಮ್ಮೆ ಕ್ಷಮೆ.!
೩. ಕಾಲಗಳು.
ಗುರುಗಳು ಕೇಳಿದರು
ವಿದ್ಯಾರ್ಥಿಗಳಿಗೆ,
ಕಾಲಗಳು ಎಷ್ಟಿವೆ?
ಉತ್ತರಿಸಿದರು, ಜಾಣರು,
ಬರಗಾಲ,ಕೇಡುಗಾಲ, ಕಲಿಗಾಲ
ಈಗ ಗುರುಗಳಾದರು,
ಅಕ್ಷರಶಃ ಕಂಗಾಲು !
- ಶಿವಪ್ರಸಾದ್ ಹಾದಿಮನಿ. ಕೊಪ್ಪಳ.
