ಬಳ್ಳಾರಿ / ಕಂಪ್ಲಿ : ಪಟ್ಟಣದ 22ನೇ ವಾರ್ಡಿನ ವಾಲ್ಮೀಕಿ ನಗರದಲ್ಲಿರುವ ಭಕ್ತರ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಕಾರಹುಣ್ಣಿಮೆ ಅಂಗವಾಗಿ ಹೋಮ ಹವನ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧಾಭಕ್ತಿಯಿಂದ ಬುಧವಾರ ಜರುಗಿದವು. ಇಲ್ಲಿನ ದೇವಸ್ಥಾನದ ಸನ್ನಿಧಾನದಲ್ಲಿ ಪೂಜಾರಿಗಳಾದ ಎರ್ರೆಮ್ಮ, ರಾಮಾಂಜಿನೆಮ್ಮ ಇವರ ನೇತೃತ್ವದಲ್ಲಿ ಹುಲಿಗೆಮ್ಮ ದೇವಿಗೆ ಎಲೆಚೆಟ್ಟು ಏರಿಸಿರುವುದು, ಹೂವಿನ ಅಲಂಕಾರ, ಮಹಾಮಂಗಳಾರತಿ, ಜೋಗ್ ಪಂಥಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತೊಸ್ರವಾಗಿ ನೆರವೇರಿದವು.
ಸಾಕಷ್ಟು ಭಕ್ತರು ದೇವಿ ಸನ್ನಿಧಾನಕ್ಕೆ ಭೇಟಿ ನೀಡಿ, ಕಾಯಿ, ಕರ್ಪೂರ ಅರ್ಪಿಸಿ, ದರ್ಶನ ಪಡೆದರು. ನಂತರ ಅನ್ನಸಂತಾರ್ಪಣೆ ಜರುಗಿತು. ಮಂಗಳವಾರದಂದು ಕಂಪ್ಲಿ-ಕೋಟೆಯಿಂದ ವಾಲ್ಮೀಕಿ ನಗರದ ದೇವಸ್ಥಾನದವರೆಗೆ ದೇವಿಯ ಕುಂಭ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ ಹಾಗೂ ಮಂಗಳವಾದ್ಯ ಪಾಲ್ಗೊಂಡಿದ್ದವು. ರಾತ್ರಿ ಭಜನೆ ಜರುಗಿತು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡ ಹೊನ್ನೂರಸ್ವಾಮಿ, ಗೋವಿಂದ, ಅಂಜಿನಿ, ಈ.ಹೊನ್ನೂರಸ್ವಾಮಿ, ಓಬಳೇಶ, ಶೀನಪ್ಪ, ರಾಮಾಂಜಿನಿ, ಪಿ.ವಿರೇಶ ಸೇರಿದಂತೆ ವಾಲ್ಮೀಕಿ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
