ವಿಜಯಪುರ/ ಆಲಮೇಲ :ಪಟ್ಟಣದಲ್ಲಿ ಹಿಂದಿನ ಕಾಲದಿಂದಲೂ ಕಾರ ಹುಣ್ಣಿಮೆ ಆಚರಣೆ ಬಹಳ ವಿಶೇಷವಾಗಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದು ದೇಶಮುಖರ ಬಂಡಿ ಹಾಗೂ ದೇಶಪಾಂಡೆಯವರ ಬಂಡಿ ಓಡಿಸುವ ಪದ್ಧತಿ ಹಿಂದಿನ ಕಾಲದಿಂದಲೂ ಬಹಳ ವಿಶೇಷವಾಗಿದ್ದು, ಈಗಲೂ ಸಹಿತ ಆ ಪದ್ಧತಿಯನ್ನು ಬಂದಿರುವರು. ಈ ಕಾರ ಹುಣ್ಣಿಮೆಯ ಆಚರಣೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಸಾಗರದಂತೆ ಸೇರುವುರು ಎಲ್ಲಾ ಜನಾಂಗದವರು ಭೇದ ಭಾವವನ್ನು ಮರೆತು ಕಾರ ಹುಣ್ಣಿಮೆಯನ್ನು ಭಕ್ತಿಯಿಂದ ಆಚರಣೆ ಮಾಡಿದರು. ತರತರದ ಬಣ್ಣ ಎರಚಿ ಊದಿಸುತ್ತಾ ಬಾರಿಸುತ್ತಾ ಸಡಗರ ಸಂಭ್ರಮದಿಂದ ಆಚರಣೆ ಮಾಡುವುದು ಆಲಮೇಲ ಪಟ್ಟಣದ ವಿಶೇಷತೆ. ಆಲಮೇಲ ಪಟ್ಟಣವು ಗಣೇಶ್ ವಿಸರ್ಜನೆ,ಗ್ರಾಮ ದೇವರಾದ ಶ್ರೀ ಪೀರ ಗಾಲಿ ಸಾಹೇಬರ ಜಾತ್ರೆ ಹಾಗೂ ಕಾರ ಹುಣ್ಣಿಮೆ ಆಚರಣೆ ರಾಜ್ಯದಲ್ಲಿ ಹೆಸರು ವಾಸಿಯಾಗಿದೆ.
ವರದಿ. ಹಣಮಂತ ಚ. ಕಟಬರ್
