ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಪ್ಪ ಅಂದರೇನೇ ದೊಡ್ಡ ಶಕ್ತಿ…

ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ ಎಲ್ಲಿ ಸಮಾಜ ಗೇಲಿ ಮಾಡತ್ತೆ ಅಂತಾನೂ ಯಾವುದನ್ನೂ ತೋರಿಸಿಕೊಳ್ಳಲ್ಲ ಹೇಳಿಕೊಳ್ಳಲ್ಲ ಅಳು ಬಂದರೂ ಅಳೋದಿಲ್ಲ ಎಲ್ಲಾ ಆಸೆ ನೋವುಗಳನ್ನ ತನ್ನೊಳಗೆ ಬಚ್ಚಿ ಇಟ್ಟುಕೊಳ್ಳುವವನು ಅಪ್ಪ
ಮಕ್ಕಳು ಏನೇ ತಪ್ಪು ಮಾಡಿದರೂ ಸಮಾಜ ಕೇಳೋದು ಒಂದೇ ಮಾತು ಅಮ್ಮ ಅಪ್ಪ ಏನ್ ಕಲಿಸಿದರು ಅಂತಾ ಅಂದರೆ ಸಮಾಜಕ್ಕೆ ಮಗು ಉತ್ತಮ ವ್ಯಕ್ತಿ ಆಗಿ ಬರಬೇಕಾದರೆ ಅಪ್ಪ ಅಮ್ಮನ ಶ್ರಮವೇ ಹೆಚ್ಚಾಗಿರತ್ತೇ ಅಂತಾ…

ಸಾಧನೆ ಮಾಡಿದ ಅದೆಷ್ಟೋ ಸಾಧಕರಿಗೆ ಅವರ ಅಪ್ಪನೇ ರೋಲ್ ಮಾಡೆಲ್ ಆಗಿರುತ್ತಾರೆ ಕಾರಣ ಅಪ್ಪನ ಶ್ರಮ, ಪೋತ್ಸಾಹ ಇಲ್ಲದೆ ಸಾಧನೆ ಮಾಡುವವರು ವಿರಳ.
ಅಪ್ಪ ಅಧ್ಭುತವಾದ ಶ್ರೇಷ್ಠವಾದ ಸಂಬಂಧ ಹಿಂದೆ ಎಲ್ಲಾ ತುಂಬಾ ಕಟ್ಟುನಿಟ್ಟಾಗಿದ್ದ ಅಪ್ಪ ಇಂದು ತುಂಬಾ ಸ್ವತಂತ್ರ ನೀಡಿದ್ದಾನೆ ಎಷ್ಟು ಅಂತಾ ಕೇಳಿದರೆ ಓದಲಿಕ್ಕೆ ಆಗಲಿ ಉದ್ಯೋಗಕ್ಕೆ ಆಗಲಿ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲಿಕ್ಕೆ ಆಗಲಿ ಮಕ್ಕಳ ಆಯ್ಕೆಯನ್ನೇ ಅಪ್ಪ ಒಪ್ಪಕೊಳ್ಳತ್ತಾನೆ. ಹಿಂದೆ ಅಪ್ಪ ಅಂದರೆ ಭಯ ಮಕ್ಕಳು ತುಂಬಾ ದೂರ ಇರತ್ತಾ ಇದ್ದರು ಮಾತು ಕೂಡಾ ಅಪ್ಪನ ಜೊತೆಗೆ ತುಂಬಾ ಕಡಿಮೆನೇ, ಆದರೆ ಇಂದು ಹಾಗಲ್ಲ ಅಪ್ಪ ಅಂದರೇನೇ ಬೆಸ್ಟ್ ಫ್ರೆಂಡ್ ಹಿತೈಷಿ ಎಲ್ಲವೂ ಅವನೇ ಆಗಿರುತ್ತಾನೆ.

ಅಮ್ಮ ಜೀವ ಕೊಡುತ್ತಾಳೆ ಅಪ್ಪ ಬಾಳು ಕೊಡುತ್ತಾನೆ ಎಂಬ ಮಾತಿದೆ. ಬಾಳು ಕೊಡುವ ಅಪ್ಪನನ್ನು ಮಕ್ಕಳು ಕೆಲವೊಮ್ಮೆ ಗೋಳಾಡಿಸುವುದೇಕೆ ಎಂಬುದಕ್ಕೆ ಉತ್ತರ ಸಿಗದೇ ಇರಬಹುದು. ಮಕ್ಕಳಿಗೆ ಅಪ್ಪನೇ ಆಕಾಶ ಅಪ್ಪನಿಗೆ ಅಪ್ಪನೇ ಸಾಟಿ. ಅಪ್ಪ ಕೆಲವೊಮ್ಮೆ ಅಮ್ಮನೂ ಆಗಿಬಿಡಬಲ್ಲ. ಜನಕ ಮಹಾರಾಜ ಸೀತಾಮಾತೆಯನ್ನು ಮದುವೆ ಮಾಡಿ ರಾಮರ ಸಂಗಡ ಕಳುಹಿಸುವಾಗ ಒಂದು ಕೋಣೆಯ ತುಂಬಾ ಅರಿಶಿನ ಹರಡಿ ‘ಇದರ ಮೇಲೆ ನಿನ್ನ ಹೆಜ್ಜೆ ಗುರುತನ್ನು ಮೂಡಿಸಿ ಹೋಗು. ಇದರ ನೆನಪಲ್ಲಿ ಮಗಳೇ ನೀನಿಲ್ಲದ ಕೊರಗನ್ನು ಮರೆಯುತ್ತೇನೆ’ ಎಂದಿದ್ದನಂತೆ. ಹೆಣ್ಣು ಮಕ್ಕಳಿಗೂ ಅಪ್ಪನಿಗೂ ತುಂಬಾ ಆತ್ಮೀಯವಾದ ನಂಟಿಯಿದೆ ಅಂದರೂ ತಪ್ಪಾಗಲಿಕ್ಕಿಲ್ಲ.

ಅಪ್ಪಂದಿರ ದಿನ’ವನ್ನು ಮೊದಲ ಬಾರಿಗೆ 19 ಜೂನ್‌ 1910ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಆಚರಿಸಲಾಗಿತ್ತು. 1916ರಲ್ಲಿ ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ತಂದೆಯ ಸೇವೆಗಳನ್ನು ಸ್ಮರಿಸಿ ಎಲ್ಲಾ ತಂದೆಯಂದಿರಿಗೂ ಶುಭಾಶಯ ತಿಳಿಸುತ್ತಾರೆ. 1966ರಲ್ಲಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಜೂನ್ ಮೂರನೇ ಭಾನುವಾರವನ್ನು ‘ವಿಶ್ವ ಅಪ್ಪಂದಿರ ದಿನ’ವೆಂದು ಘೋಷಣೆ ಮಾಡಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ‘ಅಪ್ಪಂದಿರ ದಿನ’ವನ್ನು ಚಾಲ್ತಿಗೆ ತರುತ್ತಾರೆ. ಅಮ್ಮನಿಗಾಗಿ ಹೇಗೆ ಒಂದು ದಿನ ಇದೀಯೋ ಹಾಗೇಯೇ ಅಪ್ಪಾನಿಗಾಗಿ ಒಂದು ದಿನವಿದೆ. ಭಾರತದ ಸಂಪ್ರದಾಯವೂ ಹೇಳುತ್ತದೆ ತಂದೆ-ತಾಯಿಯ ಋಣ ತೀರಿಸೋದು ಸಾಧ್ಯವಿಲ್ಲ ಆದರೂ ತಂದೆ ತಾಯಿಯ ಋಣವನ್ನು ಅಲ್ಪ ಸ್ವಲ್ಪವಾದರೂ ತೀರಿಸಿಕೊಳ್ಳಬೇಕು ಅಂತಾ ಅಪ್ಪನ ಬಗ್ಗೆ ಬರೆದರೆ ಪದಗಳೇ ಸಾಲಲ್ಲ ನಮಗೋಸ್ಕರ ಎಲ್ಲಾ ಮಾಡಿದ ಎಲ್ಲಾರ ಅಪ್ಪಂದಿರಿಗೂ ಒಂದು ಕೃತಜ್ಞತೇನ ಸಲ್ಲಿಸೋಣ.

ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲಿ ಚೌಕಿದಾರ, ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ… ಗದರೋ ಮೀಸೆಗಾರ, ಮನಸೇ ಕೋಮಲಾ… ನಿನ್ನಾ ಹೋಲೋ ಕರ್ಣಯಾರಿಲ್ಲ ಅಪ್ಪ ಐ ಲವ್ ಯೂ ಅಪ್ಪ…

  • ರೇಷ್ಮಾ, ಕುಂದಾಪುರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ