ಗದಗ :ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ||
ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು/ ವಸತಿ ಕಾಲೇಜುಗಳ ಮತ್ತು ಮೌಲಾನಾ ಆಝಾದ ಮಾದರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ದಿ. ೧೩.೦೬.೨೦೨೫ ರಂದು ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಮಲ್ಲಸಮುದ್ರ ಇಲ್ಲಿ ಸದರಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಲು ಪ್ರಾಯೋಗಿಕ ಪರೀಕ್ಷಾ ತರಗತಿಗಳನ್ನು ಹಮ್ಮಿಕೊಂಡಿದ್ದು, ಪ್ರಾಯೋಗಿಕ ಪರೀಕ್ಷಾ
ತರಗತಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಶಿಕ್ಷಣ ತಜ್ಞರಾದ ಶ್ರೀ ಎಂ. ಎಂ. ಹಳಪೇಟೆ, ಶ್ರೀ
ಅಬ್ದುಲ್ ವಹಾಬ, ಶ್ರೀಮತಿ ಲತಾ ಕಾಲವಾಡ, ಶ್ರೀ ಆರ್.ಜಿ. ಕವಲಗೇರಿ, ಶ್ರೀ ಚಂದ್ರಶೇಖರ ಜೋಗೀನ,
ಶ್ರೀಮತಿ ಎಲ್. ಎಸ್. ವಣಿಕ್ಯಾಳ, ಶ್ರೀಮತಿ ಸರೋಜಿನಿ ಬಂಡಿವಡ್ಡರ ಉಪಸ್ಥಿತರಿದ್ದರು.
ಹಾಗೂ ಇಲಾಖೆಯ ಶ್ರೀ ಅಮಿತ ಬಿದರಿ ಆರ್, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಹಾಗೂ ಪ್ರಾಂಶುಪಾಲರುಗಳಾದ ಶ್ರೀಮತಿ ಮಂಜುಳಾ ಎಸ್. ಆರಿಕಟ್ಟಿ, ಶ್ರೀಮತಿ ದೀಪಾ ಹೂಗಾರ, ಶ್ರೀ ಕಾಶಿನಾಥ ಕೆ, ಶ್ರೀ ಬಸವರಾಜ ಮಾನೋಟಗಿ, ಶ್ರೀ ದೊಡ್ಡಪ್ಪ ವಾಲ್ಮೀಕಿ, ಶ್ರೀ ಅಶೋಕ ಲಮಾಣಿ, ಶ್ರೀ ಶಿವಾನಂದ ಲಮಾಣಿ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿ/ ಸಿಬ್ಭಂದಿಗಳು ಕಾರ್ಯ ನಿರ್ವಹಿಸಿದರು.
– ಕರುನಾಡ ಕಂದ
