ಉತ್ತರ ಕನ್ನಡ/ ಮುಂಡಗೋಡ : ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಬಳಿ ಮಂಗಳವಾರ ಸಾಯಂಕಾಲ ನಡೆದಿದ್ದ ಬುಲೆಟ್ ಬೈಕ್ ಹಾಗೂ ಅಪಾಚಿ ಬೈಕ್ ಗಳ ನಡುವಿನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ಯುವಕ ತಬಕದ ಹೊನ್ನಳಿಯ ಮಂಜುನಾಥ್ (28)ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇನ್ನಿಬ್ಬರು ಯುವಕರು ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಂಡಗೋಡ ತಾಲೂಕಿನ ಅರಿಶೀನಗೇರಿ ಕ್ರಾಸ್ ನಿಂದಾ ಮುಂಡಗೋಡ ಮಾರ್ಗವಾಗಿ ಮಳಗಿ ತೆರಳುವವರೆಗೂ ರಾಜ್ಯ ಹೆದ್ದಾರಿ 69 ರಲ್ಲಿ ವ್ಯಾಪಕ ರಸ್ತೆ ಗುಂಡಿಗಳು ಬಿದ್ದಿದ್ದು ,ಕಂಡು ಕಾಣದಂತಿರುವ ಲೋಕೋಪಯೋಗಿ ಇಲಾಖೆ ಅವರು ಆದಷ್ಟು ಬೇಗ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
- ಕರುನಾಡ ಕಂದ
